ಕರ್ನಾಟಕ

karnataka

By

Published : Feb 21, 2020, 5:58 PM IST

ETV Bharat / state

ಪಾಕ್​​​ ಪರ ಘೋಷಣೆ: ಅಮೂಲ್ಯ ವಿರುದ್ಧ ತವರಿನಲ್ಲಿ ಭಾರೀ ಆಕ್ರೋಶ

ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ನಿನ್ನೆ ನಡೆಯುತ್ತಿದ್ದ ಸಿಎಎ ಹಾಗೂ ಎನ್ಆರ್​​ಸಿ ಹೋರಾಟದ ವೇಳೆ ಪಾಕ್ ಪರ ಘೋಷಣೆ ಕೂಗಿದ ಯುವತಿ ಅಮೂಲ್ಯ ವಿರುದ್ಧ ಕೊಪ್ಪದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

pro-pak-slogan-outrage-at-home town of amulya
ಪಾಕ್​ ಪರ ಘೋಷಣೆ,ಅಮೂಲ್ಯ ತವರಿನಲ್ಲಿ ಭುಗಿಲೆದ್ದ ಆಕ್ರೋಶ!

ಚಿಕ್ಕಮಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ನಿನ್ನೆ ನಡೆಯುತ್ತಿದ್ದ ಸಿಎಎ ಹಾಗೂ ಎನ್ಆರ್​​ಸಿ ಹೋರಾಟದ ವೇಳೆ ಪಾಕ್ ಪರ ಘೋಷಣೆ ಕೂಗಿದ ಯುವತಿ ಅಮೂಲ್ಯ ವಿರುದ್ಧ ಕೊಪ್ಪದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಪಾಕ್​ ಪರ ಘೋಷಣೆ: ಅಮೂಲ್ಯ ವಿರುದ್ಧ ತವರಿನಲ್ಲಿ ಭುಗಿಲೆದ್ದ ಆಕ್ರೋಶ

ನಗರದ ಪ್ರಮುಖ ವೃತ್ತದಿಂದ ಬಸ್​ ನಿಲ್ದಾಣದವರೆಗೂ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಗಳ ಸದಸ್ಯರು, ಅಮೂಲ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಕೆ ಪಾಕಿಸ್ತಾನದ ಕ್ರಿಮಿ, ಪಾಕಿಸ್ತಾನಕ್ಕೆ ಮಾರಾಟ ವಾಗಿದ್ದಾಳೆ ಎಂದು ಘೋಷಣೆ ಕೂಗಿದರು. ಕೂಡಲೇ ಆಕೆಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಇದೇ ವೇಳೆ ಅಮೂಲ್ಯ ತಂದೆ ವಾಜಿ ವಿರುದ್ಧ ಪ್ರತಿಭಟಕಾರರು ಆಕ್ರೋಶ ವ್ಯಕ್ತಪಡಿಸಿ, ಅವರು ನಕ್ಸಲ್ ಬೆಂಬಲಿಗ ಎಂದು ಕಿಡಿಕಾರಿದರು. ಅಮೂಲ್ಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಬಸ್ ನಿಲ್ದಾಣದಲ್ಲಿ ಆಕೆಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details