ಕರ್ನಾಟಕ

karnataka

By

Published : Nov 13, 2022, 4:04 PM IST

ETV Bharat / state

ಶಾಸಕ ಸಿಟಿ ರವಿ, ಸಚಿವ ಸುನಿಲ್​ ಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮುತಾಲಿಕ್​

ನೀವು ಅಧಿಕಾರದಲ್ಲಿ ಇರುವಾಗಲೇ ದತ್ತಪೀಠ ವಿವಾದವನ್ನು ಪರಿಹಾರ ಮಾಡಬಹುದು. ಆದರೂ ದತ್ತಪೀಠ ಹೋರಾಟವನ್ನು ಮುಂದೆ ತೆಗೆದುಕೊಂಡು ಹೋಗುತ್ತಿದ್ಧೀರಾ,ನಿಮಗೆ ನಾಚಿಕೆ ಆಗಬೇಕು ಎಂದು ಶಾಸಕ ಸಿ ಟಿ ರವಿ ಮತ್ತು ಸಚಿವ ಸುನಿಲ್​ ಕುಮಾರ್​​ ವಿರುದ್ಧ ಪ್ರಮೋದ್​ ಮುತಾಲಿಕ್​ ವಾಗ್ದಾಳಿ ನಡೆಸಿದರು.

pramod-muthalik-slams-ct-ravi-in-dattha-peetha-issue
ಶಾಸಕ ಸಿಟಿ ರವಿ, ಸಚಿವ ಸುನಿಲ್​ ಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮುತಾಲಿಕ್​

ಚಿಕ್ಕಮಗಳೂರು: ರಾಮನ ಜನ್ಮಸ್ಥಾನಕ್ಕಾಗಿ ಐನೂರು ವರ್ಷ ಹೋರಾಟ ಮಾಡಬೇಕಾಯಿತು. ಅದೇ ಮಾದರಿಯಲ್ಲಿ ದತ್ತಪೀಠದ ಹೋರಾಟವನ್ನು 500ವರ್ಷ ತೆಗೆದುಕೊಂಡು ಹೋಗುತ್ತಿದ್ದೀರಿ. ನಿಮಗೆ ನಾಚಿಕೆ ಆಗಬೇಕು ಸಿ‌.ಟಿ ರವಿ ಅವರೇ ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸಿ ಟಿ ರವಿ ಮತ್ತು ಸಚಿವ ಸುನಿಲ್​ ಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ನೀವು ಅಧಿಕಾರದಲ್ಲಿ ಇರುವಾಗಲೇ ದತ್ತಪೀಠ ವಿವಾದವನ್ನು ಪರಿಹಾರ ಮಾಡಬಹುದು. ಹಿಂದೂ ಅರ್ಚಕರನ್ನು ನೇಮಿಸಿ ಪರಿಹಾರ ಮಾಡಿ ಎಂದು ಕೋರ್ಟ್ ಹೇಳಿದೆ. ಕೋರ್ಟ್ ಹೇಳಿದ 24 ಗಂಟೆಯ ಒಳಗೆ ಅರ್ಚಕರನ್ನು ನೇಮಿಸಬಹುದಿತ್ತು. ಅರ್ಚಕರನ್ನು ನೇಮಿಸಿ ಪೂಜೆ ಪ್ರಾರಂಭ ಮಾಡಿದ್ರೆ ಏನ್ ಆಗುತ್ತಿತ್ತು ಸಿ ಟಿ ರವಿಯವರೇ ಎಂದು ಪ್ರಶ್ನಿಸಿದರು.

ಶಾಸಕ ಸಿ ಟಿ ರವಿ, ಸಚಿವ ಸುನಿಲ್​ ಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮುತಾಲಿಕ್​

ಇನ್ನು, ಸ್ಟೇ ತರ್ತಾರೆ ಅಂತಾ ಭಾರಿ ದೊಡ್ಡ ದೊಡ್ಡದಾಗಿ ಮಾತಾನಾಡ್ತೀರಿ. ಸುಡುಗಾಡು ರೀ, ಯಾರ್ ಸ್ಟೇ ತರ್ತಾರೆ..? ಮುಸ್ಲಿಮರ ಜೊತೆ ಕುಳಿತುಕೊಂಡು ಸೌಹಾರ್ದತೆಯಿಂದ ಬಗೆಹರಿಸಲು ಆಗೋದಿಲ್ವಾ.? ಎಂದು ಪ್ರಶ್ನಿಸಿದರು. ಇದನ್ನು ಪರಿಹರಿಸಲು ಗಟ್ಸ್ ಬೇಕಾಗಿದೆ, ಪ್ರಬಲ ಇಚ್ಛಾಶಕ್ತಿ ಬೇಕಾಗಿದೆ. ಆದರೆ ಹೀಗೆ ಮಾಡದೆ ರಾಜಕೀಯ ನಾಟಕ ಆಡುತ್ತಿದ್ದೀರಿ. ನಾವು ನಮ್ಮ ಕೊನೆ ಉಸಿರು ಇರೋವರೆಗೂ ದತ್ತಪೀಠಕ್ಕಾಗಿ ಹೋರಾಡುತ್ತೇವೆ ಎಂದು ಸಿ ಟಿ ರವಿ ಮತ್ತು ಸಚಿವ ಸುನಿಲ್​​ ಕುಮಾರ್​ ವಿರುದ್ಧ ಮುತಾಲಿಕ್​ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ :ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ಬೃಹತ್ ದತ್ತಮಾಲಾ ಶೋಭಾಯಾತ್ರೆ ಆರಂಭ

ABOUT THE AUTHOR

...view details