ಚಿಕ್ಕಮಗಳೂರು:ಕೊರೊನಾ ವೈರಸ್ ಭೀತಿಯ ಕಾರಣ ಲಾಕ್ ಡೌನ್ ಇದ್ದರೂ ನಗರದ ಎಪಿಎಂಸಿಯಲ್ಲಿ ಜನರು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದರು. ಜನರ ಅತಿರೇಕದ ವರ್ತನೆಯನ್ನು ತಹಬದಿಗೆ ತರಲು ಪೊಲೀಸರು ಲಾಠಿ ಬೀಸಬೇಕಾಯ್ತು.
ಎಪಿಎಂಸಿಯಲ್ಲಿ ಸಾಮಾಜಿಕ ಅಂತರಕ್ಕೆ ಜನರ ನಿರ್ಲಕ್ಷ್ಯ: ಪೊಲೀಸರಿಂದ ಲಾಠಿಯಿಂದ ಪಾಠ - laty charge by police chikkamagaluru
ಲಾಕ್ ಡೌನ್ ಇದ್ದರೂ ಕೂಡ ನಗರದ ಎಪಿಎಂಸಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಇರುವ ಜನರಿಗೆ ಪೊಲೀಸರು ಲಾಠಿ ಬೀಸಿದರು.
![ಎಪಿಎಂಸಿಯಲ್ಲಿ ಸಾಮಾಜಿಕ ಅಂತರಕ್ಕೆ ಜನರ ನಿರ್ಲಕ್ಷ್ಯ: ಪೊಲೀಸರಿಂದ ಲಾಠಿಯಿಂದ ಪಾಠ laty charge by police](https://etvbharatimages.akamaized.net/etvbharat/prod-images/768-512-6707310-277-6707310-1586330304306.jpg)
ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ
ಎಪಿಎಂಸಿಯಲ್ಲಿ ತರಕಾರಿ ತೆಗೆದುಕೊಂಡು ಹೋಗಲು ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರು. ಗ್ರಾಹಕರು, ವ್ಯಾಪಾರಸ್ಥರು ಹಾಗೂ ಮಧ್ಯವರ್ತಿಗಳಿಂದ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು. ಈ ವೇಳೆ, ಸಾಮಾಜಿಕ ಅಂತರ ಆದೇಶಕ್ಕಷ್ಟೇ ಸೀಮಿತವಾದಂತಿತ್ತು. ಸ್ಥಳಕ್ಕೆ ಬಂದ ಪೊಲೀಸರು ಗುಂಪು ಚದುರಿಸಲು ಹರಸಾಹಸ ಪಟ್ಟರು. ಕೊನೆಗೆ ಅನ್ಯ ದಾರಿ ಕಾಣದೆ ಲಾಟಿ ಮೂಲಕವೇ ಬಿಸಿ ಮುಟ್ಟಿಸಿದರು.