ಕರ್ನಾಟಕ

karnataka

'ಆಕ್ಸಿಜನ್​ ಆನ್​​​​​​ ವೀಲ್​​​': ಚಿಕ್ಕಮಗಳೂರಿನ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಜ್ಜಾದ ಬಸ್​​​​

By

Published : May 15, 2021, 7:26 PM IST

ಕೆಎಸ್ಆರ್​ಟಿಸಿ ಬಸ್​ನಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡಿದೆ. ಹಳ್ಳಿಯಲ್ಲಿ ಕೊರೊನಾ ಸೋಂಕಿತರಿಗೆ ಉಸಿರಾಟ ತೊಂದರೆಯಾದರೇ ಅವರ ಮನೆ ಬಾಗಿಲಿಗೆ ಈ ಬಸ್ ಹೋಗಲಿದೆ. ಒಂದು ವೇಳೆ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದಾಗ ಈ ಬಸ್​​​​​ನಲ್ಲಿ ಆಕ್ಸಿಜನ್ ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

oxygen-on-wheel-campaign-start-in-chikkamagalore-district
ಆಕ್ಸಿಜನ್​ ಆನ್​​​​​​ ವೀಲ್

ಚಿಕ್ಕಮಗಳೂರು: 'ಆಕ್ಸಿಜನ್​ ಆನ್​​​ ವೀಲ್' ಅಭಿಯಾನಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಸ್​​​ ರೆಡಿಯಾಗಿದ್ದು, ಹಳ್ಳಿಗಳಲ್ಲಿನ ಕೋವಿಡ್​ ಸೋಂಕಿತರಿಗೆ ಉಸಿರಾಟ ತೊಂದರೆಯಾದರೆ ಅವರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಚಿಕ್ಕಮಗಳೂರಿನ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಜ್ಜಾದ ಬಸ್​​​​

ಕೆಎಸ್​ಆರ್​ಟಿಸಿ ಬಸ್​ನಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡಿದೆ. ಹಳ್ಳಿಯಲ್ಲಿ ಕೊರೊನಾ ಸೋಂಕಿತರಿಗೆ ಉಸಿರಾಟ ತೊಂದರೆಯಾದರೇ ಅವರ ಮನೆ ಬಾಗಿಲಿಗೆ ಈ ಬಸ್ ಹೊಗಲಿದೆ.

ಒಂದು ವೇಳೆ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದಾಗ ಈ ಬಸ್​​​​​ನಲ್ಲಿ ಆಕ್ಸಿಜನ್ ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಡಾಕ್ಟರ್ ಅಥವಾ ಅನುಭವಿ ಸ್ಟಾಫ್ ನರ್ಸ್ ಈ ವಾಹನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನೂ ಎರಡ್ಮೂರು ದಿನದಲ್ಲಿ ಈ ಬಸ್​ ಕಾರ್ಯಾರಂಭ ಮಾಡಲಿದೆ.

ABOUT THE AUTHOR

...view details