ಕರ್ನಾಟಕ

karnataka

ETV Bharat / state

ಫಲವತ್ತಾದ ಭೂಮಿಯನ್ನು ಸರ್ಕಾರ ಜಿಂದಾಲ್​​​ ಕಂಪನಿಗೆ ನೀಡುತ್ತಿದೆ: ಮಾಜಿ ಶಾಸಕ - undefined

ಮಲೆನಾಡಿನಲ್ಲಿ ಒತ್ತುವರಿ ಜಮೀನನ್ನು ಲೀಸ್​ಗೆ ನೀಡುವಂತೆ ಬೆಳಗಾವಿ ಅಧಿವೇಶನದಲ್ಲಿಯೇ ಒತ್ತಾಯಿಸಲಾಗಿತ್ತು. ಆದರೆ, ಸರ್ಕಾರ ಇದುವರೆಗೂ ಕಿವಿಗೊಡಲಿಲ್ಲ. ಯಾವುದೇ ಕಾರಣಕ್ಕೂ ಜಿಂದಾಲ್​ ಕಂಪನಿಗೆ ಸರ್ಕಾರ ಜಮೀನು ನೀಡಬಾರದು ಎಂದು ಆಗ್ರಹಿಸಿದರು.

ಡಿ.ಎನ್.ಜೀವರಾಜ್

By

Published : Jun 14, 2019, 8:11 PM IST

ಚಿಕ್ಕಮಗಳೂರು:ಜಿಂದಾಲ್ ಕಂಪನಿಗೆ ಕೊಡುತ್ತಿರುವ ಜಾಗ ಫಲವತ್ತಾದ ಹಾಗೂ ಮೈನ್ಸ್ ಇರುವತಂಹ ಜಾಗ. ಅಂತಹ ಭೂಮಿಯನ್ನು ಕಂಪನಿಗೆ ನೀಡುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಡಿ.ಎನ್.ಜೀವರಾಜ್

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಾರ್ಗ ಸೂಚಿ ದರದ ಪ್ರಕಾರ ಕಂಪನಿಗೆ ಕೊಡುವ ದರಕ್ಕಿಂತ ಹೆಚ್ಚಿರುತ್ತದೆ. ಆದರೂ ಸರ್ಕಾರ ಪ್ರತಿ ಎಕರೆಯನ್ನು ಕೇವಲ ₹ 1.22 ಲಕ್ಷಕ್ಕೆ ನೀಡುತ್ತಿದೆ. ಮಲೆನಾಡಿನ ರೈತರು ಒತ್ತುವರಿ ಮಾಡಿರುವ ಭೂಮಿಯನ್ನು ಜಿಂದಾಲ್​ಗಾಗಿ ಎಕರೆಗೆ ನೀಡುವ ಅಷ್ಟೇ ಹಣದಲ್ಲಿ ಆ ಜಮೀನನ್ನು ರೈತರ ಹೆಸರಿಗೆ ಮಾಡಿಕೊಡಿ. ರೈತರು ಸಾಲ ಮಾಡಿ ಆದರೂ ಸರ್ಕಾರಕ್ಕೆ ಹಣ ಕಟ್ಟುತ್ತಾರೆ. ಇದರಿಂದ ರೈತರೂ ನೆಮ್ಮದಿಯಿಂದ ಬದುಕುತ್ತಾರೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details