ಕರ್ನಾಟಕ

karnataka

ಚಿಕ್ಕಮಗಳೂರು ಸಾರಿಗೆ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್!

By

Published : Apr 18, 2021, 4:31 PM IST

ಚಿಕ್ಕಮಗಳೂರು ವಿಭಾಗದ 6 ಡಿಪೋದಿಂದ‌ ಈ ಸೂಚನೆ ನೀಡಲಾಗಿದೆ. ಏಪ್ರಿಲ್ 19ರಂದು ಹಾಜರಾಗದ ನೌಕರರಿಗೆ ವರ್ಗಾವಣೆ ಮಾಡುವ ಎಚ್ಚರಿಕೆ ಈ ನೋಟಿಸ್​​ನಲ್ಲಿ ನೀಡಲಾಗಿದೆ..

Notice to chickmagaluru Transport employees
ಚಿಕ್ಕಮಗಳೂರು ಸಾರಿಗೆ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್!

ಚಿಕ್ಕಮಗಳೂರು: ಆರನೇ ವೇತನ ಆಯೋಗದ ವರದಿ ಜಾರಿಗೆ ಸಾರಿಗೆ ನೌಕಕರು ಮಾಡುತ್ತಿರುವ ಮುಷ್ಕರ ಮುಂದುವರೆದಿದೆ. ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ಎಲ್ಲಾ ನೌಕಕರು ಕರ್ತವ್ಯಕ್ಕೆ ಹಾಜರಾಗಲು ಅಧಿಕಾರಿಗಳು ಚಿಕ್ಕಮಗಳೂರಿನಲ್ಲಿ ಡೆಡ್​ಲೈನ್ ನೀಡಿದ್ದಾರೆ.

ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್!

ಇದನ್ನೂ ಓದಿ:ಕಲ್ಯಾಣ ಮಂಟಪಗಳಲ್ಲಿ ಕೋವಿಡ್‌ ನಿಯಮ ಪಾಲಿಸಿ: ಸಚಿವ ಸುರೇಶ್ ಕುಮಾರ್

ಎಲ್ಲಾ ನೌಕರರು ಏಪ್ರಿಲ್‌ 19ರಂದು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ನೋಟಿಸ್ ಮೂಲಕ ಡಿಪೋ ಮ್ಯಾನೇಜರ್​ಗಳು ನೌಕರರಿಗೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು ವಿಭಾಗದ 6 ಡಿಪೋದಿಂದ‌ ಈ ಸೂಚನೆ ನೀಡಲಾಗಿದೆ. ಏಪ್ರಿಲ್ 19ರಂದು ಹಾಜರಾಗದ ನೌಕರರಿಗೆ ವರ್ಗಾವಣೆ ಮಾಡುವ ಎಚ್ಚರಿಕೆ ಈ ನೋಟಿಸ್​​ನಲ್ಲಿ ನೀಡಲಾಗಿದೆ.

ABOUT THE AUTHOR

...view details