ಚಿಕ್ಕಮಗಳೂರು:ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಚಿಕ್ಕಮಗಳೂರು ನಗರ ಸಭೆಯ ಅಧ್ಯಕ್ಷನ ಹೈಡ್ರಾಮದಿಂದ ಬೇಸತ್ತಿದ್ದ ಬಿಜೆಪಿ ಎಲ್ಲ ಸದಸ್ಯರು ಅವಿಶ್ವಾಸ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರ ಸಭೆಯಲ್ಲಿ ಅವಿಶ್ವಾಸ ಮಂಡನೆ ಹಿನ್ನೆಲೆ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷನ ಮನೆಗೆ ಟೈಟ್ ಸೆಕ್ಯೂರಿಟಿ ಪೋಲಿಸ್ ಇಲಾಖೆ ನೀಡಿದೆ. ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಮನೆ ಬಳಿ ಒಂದು ಕೆಎಸ್ಆರ್ಪಿ ತುಕಡಿ ಸಹ ನಿಯೋಜನೆ ಮಾಡಲಾಗಿದೆ.
ಮೂರು ತಿಂಗಳಿಂದ ನಾನಾ ರೀತಿಯ ಹೈಡ್ರಾಮಕ್ಕೆ ಸಾಕ್ಷಿಯಾಗಿರುವ ನಗರಸಭೆಯಲ್ಲಿ ನಾಳೆ ಏನು ಆಗುತ್ತೆ ಎಂಬುವುದು ನಗರ ಜನರಲ್ಲಿ ಕುತೂಹಲ ಮೂಡಿಸಿದೆ. ಅವಧಿ ಮುಗಿದ್ರು ರಾಜೀನಾಮೆ ನೀಡದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಅವರು ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎರಡು ಬಾರಿ ರಾಜೀನಾಮೆ ನೀಡಿ ಅಂಗೀಕಾರದ ವೇಳೆ ವಾಪಸ್ ಪಡೆದು ನಗರ ಸಭೆಯ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ನಾಪತ್ತೆಯಾಗಿದ್ದರು.
ಈಗಾಗಲೇ ಬಿಜೆಪಿ ಪಕ್ಷದಿಂದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಅಮಾನತು ಮಾಡಲಾಗಿದ್ದು,ಅಧ್ಯಕ್ಷನನ್ನ ಕೆಳಗಿಳಿಸಲು ಅವರದೇ ಪಕ್ಷದ ನಗರಸಭೆ ಸದಸ್ಯರು ಹರಸಾಹಸ ಪಡುತ್ತಿದ್ದಾರೆ. 30 ತಿಂಗಳ ಆಡಳಿತದಲ್ಲಿ 18-12 ತಿಂಗಳಿಗೆ ಅಧಿಕಾರ ಹಂಚಿಕೆಯನ್ನು ಬಿಜೆಪಿ ಬಿಜೆಪಿ ಪಕ್ಷ ಆಂತರಿಕವಾಗಿ ಮಾಡಿ ಕೊಂಡಿತ್ತು. ಮೊದಲ ಅವಧಿಗೆ ವೇಣು ಗೋಪಾಲ್ ಅಧ್ಯಕ್ಷರಾಗಿದ್ದರು. ಈಗ ರಾಜೀನಾಮೆ ನೀಡದೇ ವೇಣು ಗೋಪಾಲ್ ಸದಸ್ಯರಿಗೆ ಆಟವನ್ನು ಆಡಿಸುತ್ತಿದ್ದು, ನಾಳೆ ನಗರಸಭೆ ಆವರಣದಲ್ಲಿ ಹೊಸ ಬೆಳವಣಿಗೆ ಸಾಧ್ಯತೆ ಇದೆ.