ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು ಬಳಿ ವ್ಯಕ್ತಿ ಕೊಲೆ... ಮೃತದೇಹವನ್ನು ರಸ್ತೆಬದಿ ಎಸೆದ ದುಷ್ಕರ್ಮಿಗಳು

ಚಿಕ್ಕಮಗಳೂರು ಬಳಿ ವ್ಯಕ್ತಿವೋರ್ವನ ಕೊಲೆಗೀಡಾಗಿದ್ದು, ಮೃತನ ದೇಹದಲ್ಲಿ ಬಂದೂಕಿನ ಗುಂಡುಗಳು ಹಾದು ಹೋಗಿರೋದು ಪತ್ತೆಯಾಗಿದೆ. ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.

By

Published : Jun 26, 2019, 2:29 PM IST

ಕೊಲೆ ಮಾಡಿ ಮೃತದೇಹವನ್ನು ರಸ್ತೆಬದಿ ಎಸೆದ ದುಷ್ಕರ್ಮಿಗಳು

ಚಿಕ್ಕಮಗಳೂರು:ದುಷ್ಕರ್ಮಿಗಳು ವ್ಯಕ್ತಿವೋರ್ವನನ್ನು ಕೊಲೆ ಮಾಡಿ ಮೃತದೇಹವನ್ನು ರಸ್ತೆಬದಿ ಎಸೆದು ಹೋಗಿರುವ ಘಟನೆ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಗಳೂರು ನಿವಾಸಿ ಹರೀಶ್ (32) ಕೊಲೆಯಾಗಿರೋ ವ್ಯಕ್ತಿ. ಬೇರೆಡೆ ಕೊಲೆ ಮಾಡಿ ಹರೀಶ್ ಮೃತದೇಹವನ್ನು ರಾತ್ರಿ ತಂದು ಹಳುವಳ್ಳಿ ಗ್ರಾಮದಲ್ಲಿ ಎಸೆಯಲಾಗಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತ ಹರೀಶ್ ದೇಹದಲ್ಲಿ ಬಂದೂಕಿನ ಗುಂಡುಗಳು ಹಾದು ಹೋಗಿರೋದು ಪತ್ತೆಯಾಗಿದ್ದು, ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿರೋ ಶಂಕೆ ಕಾಡುತ್ತಿದೆ. ಸದ್ಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details