ಕರ್ನಾಟಕ

karnataka

ಒಬ್ಬೊಬ್ಬರ ಪ್ಯೂಸ್​​​​​​ಗಳನ್ನ ಒಬ್ಬೊಬ್ಬ ನಾಯಕರೇ ಕಿತ್ತು ಹಾಕಿಕೊಳ್ಳುತ್ತಿದ್ದಾರೆ: ಕೈ ವಿರುದ್ಧ KSE ವಾಗ್ದಾಳಿ

By

Published : Aug 24, 2021, 3:25 PM IST

ಒಂದು ಸಲ ಬಹಿರಂಗ ಆಯ್ತು, ಹೊರಗಿನ-ಒಳಗಿನ ಕಾಂಗ್ರೆಸ್ಸಿಗರು ಅಂತ. ಸದ್ಯಕ್ಕೆ ತಲೆ ಮೇಲೆ ತಟ್ಟಿ ನಿಲ್ಲಿಸಿದ್ದಾರೆ. ಕಾಂಗ್ರೆಸ್ಸಿಗರ ಫ್ಯೂಸ್ ಹೆಚ್​ಡಿಕೆ ಕಿತ್ತು ಹಾಕುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ಸಿಗರೇ ಒಬ್ಬೊಬ್ಬರ ಫ್ಯೂಸ್​ ಅನ್ನ ಒಬ್ಬೊಬ್ಬರೇ ಕಿತ್ತು ಹಾಕಿಕೊಳ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

Minister KS Eshwarappa
ಸಚಿವ ಕೆ.ಎಸ್.ಈಶ್ವರಪ್ಪ

ಚಿಕ್ಕಮಗಳೂರು: ಕಾಂಗ್ರೆಸ್ಸಿಗರ ಫ್ಯೂಸ್ ಹೆಚ್​ಡಿಕೆ ಕಿತ್ತು ಹಾಕುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ಸಿಗರೇ ಒಬ್ಬೊಬ್ಬರ ಫ್ಯೂಸ್​ ಅನ್ನ ಒಬ್ಬೊಬ್ಬರೇ ಕಿತ್ತು ಹಾಕಿಕೊಳ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. ಅಲ್ಲಿರೋದೇ ನಾಲ್ಕೈದು ಜನ ನಾಯಕರು. ಹೆಸರು ಹೇಳಲು ಇಚ್ಛೆ ಪಡಲ್ಲ. ಒಬ್ಬರ ಕಂಡರೆ ಒಬ್ಬರಿಗೆ ಆಗಲ್ಲ. ಕಾಂಗ್ರೆಸ್​ನಲ್ಲಿ ನೇರ ಗುಂಪುಗಾರಿಕೆ ಇದೆ ಎಂದರು.

ಸಚಿವ ಕೆ.ಎಸ್.ಈಶ್ವರಪ್ಪ

ಒಂದು ಸಲ ಬಹಿರಂಗ ಆಯ್ತು, ಹೊರಗಿನ - ಒಳಗಿನ ಕಾಂಗ್ರೆಸ್ಸಿಗರು ಅಂತ. ಸದ್ಯಕ್ಕೆ ತಲೆ ಮೇಲೆ ತಟ್ಟಿ ನಿಲ್ಲಿಸಿದ್ದಾರೆ. ಅದು ಯಾವಾಗ ಪ್ರಜ್ವಲಿಸಿ ಸ್ಫೋಟ ಆಗುತ್ತೋ ಕಾಂಗ್ರೆಸ್ಸಿಗೆ ಗೊತ್ತಿಲ್ಲ ಎಂದು ಹೇಳಿದರು.

ಓದಿ:ಚಿನ್ನದಂಗಡಿ ದರೋಡೆ, ಹತ್ಯೆ ಪ್ರಕರಣ : ಆರೋಪಿಗಳು ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯ ಸೆರೆ

ABOUT THE AUTHOR

...view details