ಕರ್ನಾಟಕ

karnataka

By

Published : Sep 28, 2020, 5:25 PM IST

ETV Bharat / state

ದತ್ತಪೀಠದ ಪಾದುಕೆಯ ದರ್ಶನದ ವೇಳೆ ಸಚಿವ ಸಿ ಟಿ ರವಿ ನಿಯಮ ಉಲ್ಲಂಘನೆ ಆರೋಪ

ದತ್ತಪೀಠದ ಗುಹೆಯೊಳಗೆ ಯಾವುದೇ ರೀತಿಯ ವಿಡಿಯೋ ಹಾಗೂ ಫೋಟೋ ತೆಗೆಯುವಂತಿಲ್ಲ. ಆದರೆ, ಸಿ ಟಿ ರವಿ ಪಾದುಕೆ ದರ್ಶನ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೇಳೆ ಅವರ ಜೊತೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಇರುವ ಫೋಟೋಗಳು ಬಹಿರಂಗವಾಗಿವೆ..

Minister C.T Ravi
ಸಚಿವ ಸಿ.ಟಿ ರವಿ

ಚಿಕ್ಕಮಗಳೂರು :ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಇಂದು ದತ್ತಪೀಠಕ್ಕೆ ತೆರಳಿ ಪಾದುಕೆಯ ದರ್ಶನ ಪಡೆದಿದ್ದಾರೆ.

ದತ್ತಪೀಠದ ಪಾದುಕೆ ದರ್ಶನದ ವೇಳೆ ಸಚಿವ ಸಿ ಟಿ ರವಿ ನಿಯಮ ಉಲ್ಲಂಘನೆ ಆರೋಪ

ಈ ವೇಳೆ ಸಚಿವರು ನಿಯಮ ಉಲ್ಲಂಘನೆ ಮಾಡಿರುವ ಆರೋಪವೂ ಕೇಳಿ ಬಂದಿದೆ. ದತ್ತಪೀಠದ ಗುಹೆಯೊಳಗೆ ಯಾವುದೇ ರೀತಿಯ ವಿಡಿಯೋ ಹಾಗೂ ಫೋಟೋ ತೆಗೆಯುವಂತಿಲ್ಲ. ಆದರೆ, ಸಿ ಟಿ ರವಿ ಪಾದುಕೆ ದರ್ಶನ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೇಳೆ ಅವರ ಜೊತೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಇರುವ ಫೋಟೋಗಳು ಬಹಿರಂಗವಾಗಿವೆ.

ಕಾನೂನಿನ ಬಗ್ಗೆ ಅರಿವಿದ್ದರೂ ಸಚಿವ ಸಿ ಟಿ ರವಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ರೀತಿಯ ನಿಯಮ ಉಲ್ಲಂಘನೆ ಅವರಿಂದ್ಲೇ ನಡೆದಿದೆಯೋ ಅಥವಾ ಅವರ ಜೊತೆ ಹೋಗಿದ್ದ ಕಾರ್ಯಕರ್ತರಿಂದ ನಡೆದಿದೆಯೋ ಎಂಬುದರ ಬಗ್ಗೆ ಖಚಿತತೆ ಇಲ್ಲ.

ABOUT THE AUTHOR

...view details