ಚಿಕ್ಕಮಗಳೂರು:ಸಭೆಯಲ್ಲಿ ಉಡಾಫೆ ಉತ್ತರ ನೀಡಿದ ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ರನ್ನು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೊರ ಕಳುಹಿಸಿರುವ ಘಟನೆ ಇಂದು ನಡೆದಿದೆ.
ಉಡಾಫೆ ಉತ್ತರ ನೀಡಿದ ಮೆಸ್ಕಾಂ ಇಂಜಿನಿಯರ್... ಸಭೆಯಿಂದ ಹೊರ ಕಳಿಸಿದ ಡಿಸಿ! - ಮೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಶಿವಕುಮಾರ್ ಮೇಲೆ ಡಿಸಿ
ಸಭೆಯಲ್ಲಿ ಉಡಾಫೆ ಉತ್ತರ ನೀಡಿದ ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ರನ್ನು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೊರ ಕಳುಹಿಸಿರುವ ಘಟನೆ ಇಂದು ನಡೆದಿದೆ.

ಉಡಾಫೆ ಉತ್ತರ ನೀಡಿದ ಮೆಸ್ಕಾಂ ಇಂಜಿನಿಯರ್, ಸಭೆಯಿಂದ ಹೊರಹಾಕಿದ ಕಾಫಿನಾಡು ಡಿಸಿ...!
ಉಡಾಫೆ ಉತ್ತರ ನೀಡಿದ ಮೆಸ್ಕಾಂ ಇಂಜಿನಿಯರ್, ಸಭೆಯಿಂದ ಹೊರಹಾಕಿದ ಡಿಸಿ!
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೈಗಾರಿಕಾ ಹಾಗೂ ಮೆಸ್ಕಾಂ ಸಂಬಂಧ ಸಭೆ ನಡೆಯುತ್ತಿತ್ತು. ಈ ವೇಳೆ ಮೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಶಿವಕುಮಾರ್ ಮೇಲೆ ಡಿಸಿ ಬಗಾದಿ ಗೌತಮ್ ಕೆಂಡಾಮಂಡಲರಾಗಿದ್ದಾರೆ. ಮೆಸ್ಕಾಂನಲ್ಲಿ ಕೆಲಸಕ್ಕೆ ಕುರಿತಂತೆ ಫಾಲೋಅಪ್ ಬಗ್ಗೆ ವಿಚಾರಿಸುತ್ತಿದ್ದ ವೇಳೆ ನಾನು ಆ ಕೆಲಸ ಏಕೆ ಮಾಡಬೇಕು ಎಂದು ಉಡಾಫೆ ಉತ್ತರ ಕೊಟ್ಟರಂತೆ.
ಇದರಿಂದ ಕೋಪಗೊಂಡ ಡಿಸಿ, ಶಿವಕುಮಾರ್ ಅವರನ್ನು ಸಭೆಯಿಂದ ಹೊರ ಕಳುಹಿಸಿದ್ದಾರೆ. ಉಡಾಫೆ ಉತ್ತರ ನೀಡಿದ ಇಇ ವಿರುದ್ಧ ಮೆಸ್ಕಾಂ ಎಂಡಿ ಹಾಗೂ ಸರ್ಕಾರಕ್ಕೆ ವರದಿ ಕೊಡುತ್ತೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.