ಕರ್ನಾಟಕ

karnataka

ETV Bharat / state

ಪತ್ನಿ ಆಸ್ಪತ್ರೆ ಸೇರಿದ ಸುದ್ದಿ ಕೇಳಿ ಪತಿ ಸಾವು : ಇತ್ತ ಚಿಕಿತ್ಸೆ ಫಲಕಾರಿಯಾಗದೇ ಪತ್ನಿಯೂ ಕೊನೆಯುಸಿರು - ಕೋವಿಡ್​ ಸೋಂಕಿಗೆ ವೃದ್ಧೆ ಬಲಿ

ಇವತ್ತು ಕೊರೊನಾ ಸೋಂಕಿಗೆ ತುತ್ತಾಗಿದ್ದ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಗಂಡ-ಹೆಂಡತಿ ಇಬ್ಬರ ಸಾವು ಕಂಡು ಅವರ ಆಪ್ತ ವಲಯದಲ್ಲಿ ದು:ಖ ಮಡುಗಟ್ಟಿದೆ..

death
death

By

Published : May 16, 2021, 10:07 PM IST

ಚಿಕ್ಕಮಗಳೂರು: ಪತ್ನಿ ಆಸ್ಪತ್ರೆಗೆ ಸೇರಿದ ಸುದ್ದಿ ಕೇಳುತ್ತಲೇ ಪತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಶನಿವಾರ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಜಯಮ್ಮ (60) ಎಂಬುವರನ್ನು ಅವರ ಕುಟುಂಬಸ್ಥರು ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.

ಈ ವಿಷಯ ತಿಳಿದಂತಹ ಇವರ ಪತಿ ನಿವೃತ್ತ ASI ಬಸವರಾಜ್ (68)ಗೆ ಕೂಡಲೇ ಹೃದಯಾಘಾತವಾಗಿದೆ. ಅವರನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅಮ್ಮನ ಜೀವ ಮೊದಲು ಹೋಗುವುದೆಂದು ತಿಳಿದ ಮಕ್ಕಳಿಗೆ ತಂದೆಯ ಸಾವು ಆಘಾತಕಾರಿಯಾಗಿದೆ.

ಇವತ್ತು ಕೊರೊನಾ ಸೋಂಕಿಗೆ ತುತ್ತಾಗಿದ್ದ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಗಂಡ-ಹೆಂಡತಿ ಇಬ್ಬರ ಸಾವು ಕಂಡು ಅವರ ಆಪ್ತ ವಲಯದಲ್ಲಿ ದು:ಖ ಮಡುಗಟ್ಟಿದೆ.

ABOUT THE AUTHOR

...view details