ಕರ್ನಾಟಕ

karnataka

ETV Bharat / state

ಸಂಸ್ಕೃತಿಯ ಉಳಿವಿಗೆ ಸಾಕ್ಷಿಯಾಯ್ತು ಮಲೆನಾಡಿನ ಗದ್ದೆ ನಾಟಿ ದೃಶ್ಯ - Chikkamagaluru planting scene

ಮಲೆನಾಡು ಭಾಗದಲ್ಲಿ ಭತ್ತದ ನಾಟಿ, ಬಿತ್ತುವ ಕಾರ್ಯ ಆರಂಭವಾಗಿದೆ. ನಾಟಿ ಕೆಲಸಕ್ಕೆ ಆಗಮಿಸಿರುವ ಹತ್ತಾರು ಮಹಿಳೆಯರು ನಾಟಿ ಮಾಡುವ ಜೊತೆಗೆ ಜನಪದ ಗೀತೆಗಳನ್ನು ಹಾಡುತ್ತಾ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಮನಸ್ಸಿನ ಉಲ್ಲಾಸಕ್ಕಾಗಿ ಈ ರೀತಿ ಜನಪದ ಹಾಡುಗಳನ್ನು ಹಾಡುವ ಪದ್ಧತಿ ಹಿಂದಿನಿಂದಲೂ ಮಹಿಳೆಯರು ಪಾಲಿಸಿಕೊಂಡು ಬಂದಿದ್ದಾರೆ.

Malnad Chikkamagaluru witnessing the survival of culture
ಸಂಸ್ಕೃತಿಯ ಉಳಿವಿಗೆ ಸಾಕ್ಷಿಯಾಯ್ತು ಮಲೆನಾಡಿನ ಗದ್ದೆ ನಾಟಿ ದೃಶ್ಯ

By

Published : Jul 12, 2020, 5:09 PM IST

ಚಿಕ್ಕಮಗಳೂರು:ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ಇದರ ನಡುವೆಯೇ ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆಯ ಭಾಗದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ.

ಸಂಸ್ಕೃತಿಯ ಉಳಿವಿಗೆ ಸಾಕ್ಷಿಯಾಯ್ತು ಮಲೆನಾಡಿನ ಗದ್ದೆ ನಾಟಿ ದೃಶ್ಯ

ಮಲೆನಾಡು ಭಾಗದಲ್ಲಿ ಭತ್ತದ ನಾಟಿ, ಬಿತ್ತನೆ ಕಾರ್ಯ ಆರಂಭವಾಗಿದ್ದು, ಮೂಡಿಗೆರೆ ತಾಲೂಕಿನ ಬಣಕಲ್ ಕೊಡೆಬೈಲ್ ನ ಮೋಹನ್ ಗೌಡ ಅವರ ಗದ್ದೆಯಲ್ಲಿ ಮಹಿಳೆಯರಿಂದ ವಿಶೇಷವಾಗಿ ನಾಟಿ ಕಾರ್ಯ ಮಾಡಿಸಲಾಗುತ್ತಿದೆ. ಈ ನಾಟಿ ಕೆಲಸಕ್ಕೆ ಆಗಮಿಸಿರುವ ಹತ್ತಾರು ಮಹಿಳೆಯರು ನಾಟಿ ಮಾಡುವ ಜೊತೆಗೆ ನಾಟಿಯ ಜನಪದ ಗೀತೆಗಳನ್ನು ಹಾಡುತ್ತಾ, ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಮನಸ್ಸಿನ ಉಲ್ಲಾಸಕ್ಕಾಗಿ ಈ ರೀತಿ ಜನಪದ ಹಾಡುಗಳನ್ನು ಹಾಡುವ ಪದ್ದತಿ ಹಿಂದಿನಿಂದಲೂ ಮಹಿಳೆಯರು ಪಾಲಿಸಿಕೊಂಡು ಬಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯಾಂತ್ರೀಕರಣ ವ್ಯವಸಾಯ ಹೆಚ್ಚಾದ ಹಿನ್ನೆಲೆ ಈ ರೀತಿಯ ಪದ್ದತಿಗಳು ತುಂಬಾನೆ ವಿರಳ. ಮಲೆನಾಡು ಪ್ರದೇಶದ ಕೆಲವೆಡೆ ಈ ರೀತಿಯ ಪುರಾತನ ವ್ಯವಸಾಯ ಪದ್ಧತಿಯನ್ನು ಇಂದಿಗೂ ಅನುಸರಿಸುತ್ತಿರುವುದು ಸಂಸ್ಕೃತಿಯ ಉಳಿವಿಗೆ ಸಾಕ್ಷಿಯಾಗಿದೆ.

ABOUT THE AUTHOR

...view details