ಕರ್ನಾಟಕ

karnataka

ETV Bharat / state

ಪ್ರೇಮ ವೈಫಲ್ಯದಿಂದ ಮನನೊಂದು ನೇಣಿಗೆ ಶರಣಾದ ಯುವಕ - ಚಿಕ್ಕಮಗಳೂರು ನೇಣಿಗೆ ಶರಣಾದ ಯುವಕ ನ್ಯೂಸ್​

ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.

ನೇಣಿಗೆ ಶರಣಾದ ಯುವಕ

By

Published : Nov 23, 2019, 4:12 PM IST

Updated : Nov 23, 2019, 11:07 PM IST

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಬಸರಿಕಟ್ಟೆಯ ಯುವಕ ಪ್ರೇಮ ವೈಫಲ್ಯದಿಂದ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕನನ್ನು ಸತೀಶ್​ ಎಂದು ಗುರುತಿಸಲಾಗಿದೆ.

ಮನನೊಂದು ನೇಣಿಗೆ ಶರಣಾದ ಯುವಕ

ಈತ ಹಾಗೂ ಮೂಡಿಗೆರೆ ತಾಲೂಕಿನ ಹಿರೈಬೈಲಿನ ಯುವತಿ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇವರ ಪ್ರೇಮದಲ್ಲಿ ಬಿರುಕು ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಆ ಯುವತಿಯನ್ನು ಈತನೇ ನರ್ಸಿಂಗ್​ ಓದಿಸಿದ್ದು ಆಕೆಗೆ ಕೆಲಸವೂ ಸಿಕ್ಕಿತ್ತು. ಇದಾದ ಬಳಿಕ ಆಕೆ ಸತೀಶ್​ಗೆ ಸರ್ಕಾರಿ ಕೆಲಸ ಪಡೆಯುವಂತೆ ಹೇಳುತ್ತಿದ್ದಳು. ಆದರೆ ಕಡಿಮೆ ಓದಿದ್ದ ಸತೀಶ್​ಗೆ ಸರ್ಕಾರಿ ಕೆಲಸ ಸಿಕ್ಕಿರಲಿಲ್ಲ. ಈ ವಿಚಾರವಾಗಿ ಇಬ್ಬರ ಮಧ್ಯೆ ಹಲವು ಬಾರಿ ಜಗಳವಾಗಿತ್ತು. ನಂತರ ಆಕೆಯ ಫೋನ್​ ಸ್ವಿಚ್ಡ್​​​​​ ಆಫ್​ ಆಗಿತ್ತು. ಇದರಿಂದ ಮನನೊಂದ ಸತೀಶ್​ ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸತೀಶ್ ಸಾಯುವ ಮುನ್ನ ಮೊಬೈಲ್​ನಲ್ಲಿ ನನ್ನ ಸಾವಿಗೆ ಈಕೆಯೇ ಕಾರಣ ಎಂದೂ ಬರೆದುಕೊಂಡಿದ್ದು ಈಕೆಗೆ ತಕ್ಕ ಶಿಕ್ಷೆ ಆಗಬೇಕು ಎಂದು ಯುವಕನ ಮನೆಯವರು ಆಗ್ರಹಿಸಿದ್ದಾರೆ.

Last Updated : Nov 23, 2019, 11:07 PM IST

ABOUT THE AUTHOR

...view details