ಕರ್ನಾಟಕ

karnataka

By

Published : Apr 27, 2020, 6:51 PM IST

ETV Bharat / state

ಲಾಕ್​​ಡೌನ್​ನಿಂದ ಮುಕ್ತಿ: 11 ಸರ್ಕಾರಿ ಬಸ್​ಗಳಲ್ಲಿ ತಾಯ್ನಾಡಿಗೆ ಹೊರಟ ಕಾರ್ಮಿಕರು

ಲಾಕ್​​ಡೌನ್ ಜಾರಿಯಾದ ಬಳಿಕ ವಲಸೆ ಕಾರ್ಮಿಕರು ತಮ್ಮ ತಾಯ್ನಾಡಿಗೆ ವಾಪಸ್​ ಆಗಲಾರದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ರಾಜ್ಯದಲ್ಲಿ ಲಾಕ್​​ಡೌನ್​ ನಿಯಮದಲ್ಲಿ ಕೊಂಚ ಸಡಿಲಿಕೆ ಮಾಡಿದ್ದು, ಚಿಕ್ಕಮಗಳೂರಿನಲ್ಲಿ ಸಿಲುಕಿದ್ದ ರಾಜ್ಯದ ನಾನಾ ಭಾಗದ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಕಳುಹಿಸುವ ಕಾರ್ಯ ನಡೆಯುತ್ತಿದೆ. ಸರ್ಕಾರಿ ಬಸ್​ಗಳ ವ್ಯವಸ್ಥೆಯ ಮೂಲಕ ಅವರನ್ನು ಅವರ ಊರಿಗೆ ಕಳುಹಿಸಿಕೊಡಲಾಗುತ್ತಿದೆ.

Liberation from lockdown: Workers leaving home on 11 government buses
ಲಾಕ್​​ಡೌನ್​ನಿಂದ ಮುಕ್ತಿ: 11 ಸರ್ಕಾರಿ ಬಸ್​ಗಳಲ್ಲಿ ತಾಯ್ನಾಡಿಗೆ ಹೊರಟ ಕಾರ್ಮಿಕರು

ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ಲಾಕ್​ಡೌನ್​ನಿಂದ ನಿರಾಶ್ರಿತರ ಕೇಂದ್ರ ಹಾಗೂ ಇತರ ಸ್ಥಳಗಳಲ್ಲಿ ಉಳಿದುಕೊಂಡಿದ್ದ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರಿಗೆ ಜಿಲ್ಲಾಡಳಿತದ ವತಿಯಿಂದ ಕಳುಹಿಸಿಕೊಡಲಾಗುತ್ತಿದೆ.

ಲಾಕ್​ಡೌನ್ ಹಿನ್ನೆಲೆ ಕಳೆದ ಒಂದು ತಿಂಗಳಿಂದ ಕಾಫಿ ತೋಟದ ಲೈನ್ ಮನೆಗಳಲ್ಲಿ ವಾಸವಾಗಿದ್ದ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಕಳುಹಿಸಲಾಗುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿನ ಕಾಫಿ ತೋಟಗಳಿಗೆ ದುಡಿಯಲು ಬಂದಿದ್ದ ಎ್ಲಲ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಮೂಡಿಗೆರೆ ತಹಶೀಲ್ದಾರ್​ ರಮೇಶ್​ ಮಾಹಿತಿ ನೀಡಿದ್ದಾರೆ.

ಲಾಕ್​​ಡೌನ್​ನಿಂದ ಮುಕ್ತಿ: 11 ಸರ್ಕಾರಿ ಬಸ್​ಗಳಲ್ಲಿ ತಾಯ್ನಾಡಿಗೆ ಹೊರಟ ಕಾರ್ಮಿಕರು

ಪ್ರಮುಖವಾಗಿ ಕಾಫಿ ಹಾಗೂ ಮೆಣಸು ಕೊಯ್ಯಲು ಬಂದಿದ್ದ ಕಾರ್ಮಿಕರನ್ನು ಮೂಡಿಗೆರೆಯಿಂದ 11 ಸರ್ಕಾರಿ ಬಸ್​ಗಳಲ್ಲಿ ತಮ್ಮ ಊರಿಗೆ ಕಳುಹಿಸಿಕೊಡಲಾಗುತ್ತಿದ್ದು, ರಾಯಚೂರು, ಬಳ್ಳಾರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಕಾರ್ಮಿಕರು ತಮ್ಮ ಊರಿಗೆ ತೆರಳಲಿದ್ದಾರೆ. 11 ಬಸ್​ಗಳಲ್ಲಿ 200ಕ್ಕೂ ಅಧಿಕ ಕಾರ್ಮಿಕರನ್ನು ತಮ್ಮ ಊರಿಗೆ ಸೇರಿಸುವ ಪ್ರಯತ್ನ ಜಿಲ್ಲಾಡಳಿತ ಮಾಡಿದೆ.

ABOUT THE AUTHOR

...view details