ಕರ್ನಾಟಕ

karnataka

By

Published : Apr 10, 2022, 5:55 PM IST

ETV Bharat / state

'ನೀವು ಮಾಡುತ್ತಿರುವ ರಾಜಕೀಯ ನಿಮ್ಮ ಹೊಟ್ಟೆ ಪಾಡಿಗೆ': ಹೆಚ್​ಡಿಕೆಗೆ ಕಾಳಿ ಸ್ವಾಮಿ ಕಿಡಿ

ನಾನು ಮಾತನಾಡುತ್ತಿರುವುದು ನನ್ನ ಹೊಟ್ಟೆ ಪಾಡಿಗೆ. ನೀವು ಮಾಡುತ್ತಿರುವ ರಾಜಕೀಯ ನಿಮ್ಮ ಹೊಟ್ಟೆಪಾಡಿಗೆ ಎಂದು ಕಾಳಿ ಸ್ವಾಮೀಜಿ, ಹೆಚ್​ಡಿಕೆ ಅವರನ್ನು ಟೀಕಿಸಿದರು.

kali-swami
ಕಾಳಿ ಸ್ವಾಮಿ

ಚಿಕ್ಕಮಗಳೂರು: ಅರ್ಚಕರು ಹೊಟ್ಟೆ ಪಾಡಿಗೆ ಅರ್ಚಕ ವೃತ್ತಿ ಮಾಡುತ್ತಾರೆ ಎಂದು ಹೇಳಿದ್ದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿಗೆ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಪ್ರತಿಕ್ರಿಯಿಸಿದರು. ನೋಡಿ ಸ್ವಾಮಿ ಪ್ರತಿಯೊಂದು ಜೀವಿಯೂ ಕೂಡ ಹೊಟ್ಟೆ ಪಾಡಿಗೆ ಜೀವಿಸುತ್ತಿದೆ. ನಾನು ಮಾತನಾಡುತ್ತಿರುವುದು ಹೊಟ್ಟೆ ಪಾಡಿಗೆ. ನೀವು ಮಾಡುತ್ತಿರುವ ರಾಜಕೀಯ ನಿಮ್ಮ ಹೊಟ್ಟೆಪಾಡಿಗೆ ಎಂದರು.

ನಿಮ್ಮ ವಂಶಕ್ಕೆ ನೀವು ರಾಜಕೀಯ ಮಾಡುತ್ತಿದ್ದೀರೇ ಹೊರತು, ಜಗತ್ತಿಗೆ ರಾಜಕೀಯ ಮಾಡ್ತಿಲ್ಲ. ನಿಮ್ಮ ವಂಶಕ್ಕೆ, ಅಪ್ಪ, ಅಣ್ಣ, ಮಗ, ತಮ್ಮ, ಸೊಸೆ, ಅಳಿಯ ಇವರಿಗಷ್ಟೇ ನಿಮ್ಮ ರಾಜಕೀಯ. ಅಂತದ್ರಲ್ಲಿ ನೀವು ಹೇಳ್ತೀರಾ ಪುರೋಹಿತರು ಹೊಟ್ಟೆ ಪಾಡಿಗೆ ಪೂಜೆ ಮಾಡ್ತಾರೆ ಅಂತಾ. ಎಲ್ಲರೂ ಮಾಡೋದು ಹೊಟ್ಟೆ ಪಾಡಿಗೆ ಸ್ವಾಮಿ ಎಂದು ಅವರು ಹೇಳಿದರು.


ಇದನ್ನೂ ಓದಿ:ಚಂದ್ರು ಹತ್ಯೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ : ಸಿಎಂ ಬೊಮ್ಮಾಯಿ

ಚಂದ್ರು ಹತ್ಯೆ ಕುರಿತು ಮಾತನಾಡಿ, ಬೆಂಗಳೂರಿನಲ್ಲಿ ತೀರಿ ಹೋದ ಚಂದ್ರು ಹಿಂದೂವಲ್ಲ, ಕ್ರಿಶ್ಚಿಯನ್. ಆತನ ಮೃತದೇಹವನ್ನು ಎಲ್ಲಿ ಹೂತಿದ್ದಾರೆ, ನೋಡಿದ್ದೀರಾ?. ನಾನು ಸ್ಮಶಾನದ ಬಾಗಿಲಿಗೆ ಹೋಗಿ ವಾಪಸ್ ಬಂದಿದ್ದೇನೆ. ಕನ್ವರ್ಟೆಡ್ ಕ್ರಿಶ್ಚಿಯನ್ ಹುಡುಗನನ್ನು ದಲಿತ...ದಲಿತ... ಎಂದು ಏಕೆ ಹೇಳ್ತೀರಾ?. ಆ ಹುಡುಗ ಸಾವಿಗೀಡಾಗಿರುವುದಕ್ಕೆ ನಮಗೆಲ್ಲಾ ನೋವಿದೆ. ದಲಿತ, ಹಿಂದೂವನ್ನು ಕೊಲೆ ಮಾಡಿದ್ರು ಅಂತ ಮತ್ತೆ ಹಿಂದೂಗಳನ್ನು ಎತ್ತಿ ಕಟ್ಟಬೇಡಿ ಎಂದರು.

ABOUT THE AUTHOR

...view details