ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ 103ನೇ ಜನ್ಮ ದಿನಾಚರಣೆ.. - KPCC President Dinesh Gundurao

ಕಾಂಗ್ರೆಸ್​ ಪಕ್ಷದ ವತಿಯಿಂದ ಇಂದಿರಾ ಗಾಂಧಿಯವರ 103 ನೇ ಜನ್ಮ ದಿನಾಚರಣೆ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗಮಿಸಿದ್ದರು.

ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್

By

Published : Nov 19, 2019, 9:02 PM IST

ಚಿಕ್ಕಮಗಳೂರು:ಕಾಂಗ್ರೆಸ್​ ಪಕ್ಷದ ವತಿಯಿಂದ ಇಂದಿರಾ ಗಾಂಧಿಯವರ 103ನೇ ಜನ್ಮ ದಿನಾಚರಣೆ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗಮಿಸಿದ್ದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್..

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ 10 ರಿಂದ 12 ಸ್ಥಾನವನ್ನು ಕಾಂಗ್ರೆಸ್​ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅನರ್ಹ ಶಾಸಕರ ನಡೆಯನ್ನು ಜನರು ಗಮನಿಸಿದ್ದಾರೆ. ಹೆಚ್.ವಿಶ್ವನಾಥ್ ಜಿಟಿಡಿ ಮನೆಗೆ ಭೇಟಿ ಹಿನ್ನೆಲೆ ಜಿಟಿ ದೇವೇಗೌಡ ಇದಕ್ಕೆ ಯಾವ ರೀತಿ ಸ್ಪಂದಿಸಿದಾರೆ ಎಂಬುದು ಯಾರಿಗೆ ಗೊತ್ತು? ಯಾರು ಯಾರ್ ಮನೆಗೆ ಭೇಟಿ ಕೊಟ್ಟರೂ ಫಲಿತಾಂಶವನ್ನು ನೀವೇ ನೋಡಿ ಎಂದರು.

ಇನ್ನು, ಕಾಂಗ್ರೆಸ್ ಪಕ್ಷದಲ್ಲಿ ವಿಶ್ವನಾಥ್ ಅವರನ್ನು ಗೌರವದಿಂದ ನೋಡಿ ಕೊಂಡಿದ್ದೀವಿ. ಜೆಡಿಎಸ್ ಸೇರಿ ಶಾಸಕರಾದರು, ಈಗ ಬಿಜೆಪಿ ಸೇರಿದ್ದಾರೆ. ಅವರಿಗೆ ಯಾವ ಸಿದ್ದಾಂತ, ನೈತಿಕತೆ ಇದೆ. ವಿಶ್ವನಾಥ್ ಯಾವ ಕಾರಣಕ್ಕೆ ಬಿಜೆಪಿ ಸೇರಿದ್ದಾರೆ ಅನ್ನೋದು ರಾಜ್ಯಕ್ಕೆ ಗೊತ್ತು. ನೈತಿಕತೆ ಇಲ್ಲದವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ವಿಶ್ವನಾಥ್ ಈ ಮಟ್ಟಕ್ಕೆ ಇಳಿದರಲ್ಲ ಎಂದು ನನಗೆ ತುಂಬಾ ನೋವಾಗುತ್ತದೆ ಎಂದರು.

ABOUT THE AUTHOR

...view details