ಕರ್ನಾಟಕ

karnataka

By

Published : Feb 14, 2021, 3:48 PM IST

Updated : Feb 14, 2021, 7:50 PM IST

ETV Bharat / state

ಚಿಕ್ಕಮಗಳೂರು: ಪ್ರೇಮಿಗಳ ದಿನದಂದು ಮತ್ತೆ ಮದುವೆಯಾದ ಪತಿ-ಪತ್ನಿ!

ಚಿಕ್ಕಮಗಳೂರಿನಲ್ಲಿ ಯೋಗೇಶ್ ಮತ್ತು ಹೇಮಲತಾ ಎಂಬ ದಂಪತಿ ಇಂದು ಮತ್ತೊಮ್ಮೆ ಮದುವೆಯಾಗಿದ್ದಾರೆ. ಅದು ಯಾಕೆ ಮತ್ತು ಹೇಗೆ ಗೊತ್ತಾ?

husband and wife married again
ಯೋಗೇಶ್ ಮತ್ತು ಹೇಮಲತಾ

ಚಿಕ್ಕಮಗಳೂರು: ಪ್ರೇಮಿಗಳ ದಿನದಂದು ಪತಿ ಪತ್ನಿಗೆ ದೇವಸ್ಥಾನದ ಎದುರು ಮತ್ತೊಮ್ಮೆ ತಾಳಿ ಕಟ್ಟಿರುವಂತಹ ವಿಶೇಷ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಪ್ರೇಮಿಗಳ ದಿನದಂದು ಮತ್ತೆ ಮದುವೆಯಾದ ಪತಿ-ಪತ್ನಿ

ಹೇಮಲತಾ ಎಂಬುವವರು ವಾಕಿಂಗ್​ ಮಾಡುವಾಗ ತಮ್ಮ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ಈ ಸರ ಅಲ್ಲೇ ವಾಕಿಂಗ್​ ಮಾಡಲು ಬಂದಿದ್ದ ವಿನೋದ್-ರಾಘವೇಂದ್ರ ಎಂಬುವರಿಗೆ ಸಿಕ್ಕಿತ್ತು.

ಓದಿ:'ಪ್ರೇಮಿಗಳ ದಿನದಂದು ಸರ್ಕಾರಿ ರಜೆ ಘೋಷಿಸಿ'

ಬಳಿಕ ಅವರು ಪೋಸ್ಟರ್ ಮಾಡಿ ಜಿಲ್ಲಾ ಆಟದ ಮೈದಾನದಲ್ಲಿ ಅಂಟಿಸಿದ್ದರು. ಈ ಪೋಸ್ಟರ್​ ನೋಡಿದ ಯೋಗೇಶ್​ ಮತ್ತು ಹೇಮಲತಾ ದಂಪತಿ ಅಲ್ಲಿಗೆ ಬಂದು ಮಾಂಗಲ್ಯ ಸರವನ್ನು ವಾಪಸ್​​ ತೆಗೆದುಕೊಂಡಿದ್ದಾರೆ. ಬಳಿಕ ಯೋಗೇಶ್​ ದೇವಸ್ಥಾನವೊಂದರಲ್ಲಿ ತಮ್ಮ ಪತ್ನಿಗೆ ಮತ್ತೆ ತಾಳಿ ಕಟ್ಟಿದ್ದಾರೆ.

Last Updated : Feb 14, 2021, 7:50 PM IST

ABOUT THE AUTHOR

...view details