ಚಿಕ್ಕಮಗಳೂರು :ಜಿ ಟಿ ದೇವೇಗೌಡರನ್ನು ನಾವು ಉಚ್ಛಾಟನೆ ಮಾಡ್ತೀವಿ ಎಂದು ಹೇಳಿಲ್ಲ. ಸ್ವತಃ ಅವರೇ ಉಚ್ಛಾಟನೆ ಮಾಡಲಿ ಎಂದು ಕಾಯುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಗೆದ್ದ ಮೇಲೆ ಅವಧಿ ಮುಗಿಯೋವರೆಗೆ ನಿಷ್ಠರಾಗಿ ಇರಬೇಕು. ಉಚ್ಛಾಟನೆಗೆ ಹೆದರಲ್ಲ, ಕಾರಣ ಮೆಂಬರ್ ಶಿಪ್ ಹೋಗಲ್ಲ.
ಅದಕ್ಕೆ ಅವರು ಎಲ್ಲವನ್ನೂ ಮಾತನಾಡುತ್ತಾ ಇರೋದು. ಉಚ್ಛಾಟನೆ ಮಾಡಲಿ ಎಂದು ಅವರು ಕಾಯುತ್ತಿದ್ದಾರೆ. ಇನ್ನೂ ಹಗುರವಾಗಿ ಮಾತನಾಡಬಹುದು. ಅವರಿಗೆ ಬೇರೆ ತರಹದ ಅವಕಾಶಗಳಿವೆ. ಅವರ ಮಾತು, ರೀತಿ-ನೀತಿ ಬದ್ಧತೆ ನೋಡಿದ್ರೆ ಹಾಗೆ ಅನಿಸುತ್ತದೆ ಎಂದರು.