ಚಿಕ್ಕಮಗಳೂರು:ರಾಜ್ಯದ ಹಲವೆಡೆ ಮೊನ್ನೆಯಿಂದ ಮಳೆಯಾಗುತ್ತಿದ್ದು, ಚಿಕ್ಕಮಗಳೂರಿನಲ್ಲೂ ಕೂಡ ಇಂದು ಧಾರಾಕಾರ ಮಳೆಯಾಗಿದೆ.
ಚಿಕ್ಕಮಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆ
ಚಿಕ್ಕಮಗಳೂರಿನಲ್ಲಿಂದು ಗುಡುಗು ಸಹಿತ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ...ರೈತರ ಮೊಗದಲ್ಲಿ ಸಂತಸ
ಚಿಕ್ಕಮಗಳೂರು ನಗರ ಸೇರಿದಂತೆ ಬಾಳೆಹೊನ್ನೂರು, ಕಳಸ, ಶೃಂಗೇರಿ, ಕೊಪ್ಪ ಸುತ್ತಮುತ್ತ ಮಳೆ ಸುರಿದಿದೆ. ಇಷ್ಟು ದಿನ ಕಾದ ಕಾವಲಿಯಂತಾಗಿದ್ದ ನಗರಕ್ಕೆ ಮಳೆ ತಂಪೆರೆದಿದ್ದು, ಗುಡುಗು-ಸಿಡಿಲಿನೊಂದಿಗೆ ವರುಣನ ಆಗಮನವಾಗಿದೆ.