ಚಿಕ್ಕಮಗಳೂರು: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಸಹ ಭಾರಿ ಮಳೆ ಸುರಿಯುತ್ತಿದ್ದು, ಪರಿಣಾಮ ಹತ್ತಾರು ಜಲಪಾತಗಳು ತುಂಬಿ ತುಳುಕುತ್ತಿವೆ.
ಮೋಜು, ಮಸ್ತಿಗೆ ಎಂದು ಚಾರ್ಮಾಡಿ ಘಾಟ್ಗೆ ಬಂದಂತಹ ಪ್ರವಾಸಿಗರಿಗೆ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬ್ರೇಕ್ ಹಾಕಿದ್ದು, ಗಸ್ತು ತಿರುಗಾಟ ಪ್ರಾರಂಭಿಸಿದ್ದಾರೆ. ಚಾರ್ಮಾಡಿ ಘಾಟ್ನ ವ್ಯೂ ಪಾಯಿಂಟ್ನಲ್ಲೇ ಹೈವೇ ಪೆಟ್ರೋಲ್(ಹೆದ್ದಾರಿ ವೀಕ್ಷಣ ವಾಹನ) ಪೊಲೀಸ್ ವಾಹನ ಬೀಡು ಬಿಟ್ಟಿದೆ. ಯಾರು ಜಲಪಾತಗಳಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.