ಕರ್ನಾಟಕ

karnataka

ETV Bharat / state

ಎಸ್​​ಡಿಪಿಐ ಕೆಟ್ಟ ಕೆಲಸ ಮಾಡಿದ್ರೆ ಕ್ರಮ ಕೈಗೊಳ್ಳಲಿ: ವೈ.ಎಸ್.ವಿ. ದತ್ತ - ಬೆಂಗಳೂರಿನ ಗಲಭೆ ಪ್ರಕರಣದಲ್ಲಿ ಎಸ್​​ಡಿಪಿಐ ಪಾತ್ರ

ಬೆಂಗಳೂರಿನ ಗಲಭೆ ಪ್ರಕರಣದಲ್ಲಿ ಎಸ್​​ಡಿಪಿಐ ಪಾತ್ರ ಹಾಗೂ ಎಸ್​​ಡಿಪಿಐ ಸಂಘಟನೆ ನಿಷೇಧ ವಿಚಾರವಾಗಿ ಮಾಜಿ ಶಾಸಕ ವೈ.ಎಸ್.ವಿ. ದತ್ತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Former MLA Y.S.V. Datta statement
ಮಾಜಿ ಶಾಸಕ ವೈ.ಎಸ್.ವಿ. ದತ್ತ

By

Published : Aug 20, 2020, 4:22 PM IST

ಚಿಕ್ಕಮಗಳೂರು:ಬೆಂಗಳೂರಿನ ಗಲಭೆ ಪ್ರಕರಣದಲ್ಲಿ ಸರ್ಕಾರವು ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಎಸ್​​ಡಿಪಿಐ, ಕಾಂಗ್ರೆಸ್, ಜಾತ್ಯತೀತ, ಕೋಮುವಾದಿ, ಸೆಕ್ಯುಲರ್ ಎಂದು ಹೇಳಿಕೊಂಡು ಸುಮ್ಮನೆ ಕುಳಿತು ಕೊಳ್ಳಬಾರದು ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ಗಲಭೆ ಪ್ರಕರಣ ಕುರಿತು ಮಾತನಾಡಿದ ಅವರು, ಎಸ್​​ಡಿಪಿಐ ಸಂಘಟನೆ ಕೆಟ್ಟ ಕೆಲಸ ಮಾಡಿದೆ ಎಂದಾದರೆ, ಕೂಡಲೇ ಸರ್ಕಾರ ಕಟ್ಟು ನಿಟ್ಟಿನ ತೀರ್ಮಾನ ಮಾಡಬೇಕು. ಸರ್ಕಾರ ಸುಮ್ಮನೆ ಬಾಯಲ್ಲಿ ಹೇಳಬಾರದು ಎಂದರು.

ಮಾಜಿ ಶಾಸಕ ವೈ.ಎಸ್.ವಿ. ದತ್ತ

ಯಾವತ್ತೂ ಕೂಡ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ತಂತ್ರ ಅನುಸರಿಸಬಾರದು. ತೀರ್ಮಾನ ತೆಗೆದುಕೊಂಡರೆ ಅದು ಖಡಕ್​​ ಆಗಿರಬೇಕು. ಕೂಡಲೇ ತೀರ್ಮಾನ ಬರಬೇಕು ಎಂದರು.

ABOUT THE AUTHOR

...view details