ಚಿಕ್ಕಮಗಳೂರು : ಸಚಿವ ಆರ್. ಅಶೋಕ್ ಪಿಎ ಗಂಗಾಧರ್ ಶೃಂಗೇರಿಯ ಸಬ್ ರಿಜಿಸ್ಟ್ರಾರ್ ಅಧಿಕಾರಿ ಚೆಲುವರಾಜ್ ಬಳಿ ಹಣಕ್ಕೆ ಬೇಡಿಕೆ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹಣಕ್ಕೆ ಬೇಡಿಕೆ ಆರೋಪ: ಸಚಿವ ಆರ್. ಅಶೋಕ್ ಪಿಎ ಗಂಗಾಧರ್ ಎಫ್ಐಆರ್ ದಾಖಲು - FIR against minister R ashok PA Gangadhar
ಸಚಿವ ಆರ್. ಅಶೋಕ್ ಪಿಎ ಗಂಗಾಧರ್ ತನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಶೃಂಗೇರಿಯ ಸಬ್ ರಿಜಿಸ್ಟ್ರಾರ್ ಅಧಿಕಾರಿ ಚೆಲುವರಾಜ್ ಎಫ್ಐಆರ್ ದಾಖಲಿಸಿದ್ದಾರೆ.
ಸಬ್ ರಿಜಿಸ್ಟ್ರಾರ್ ಅಧಿಕಾರಿ
ಇದೇ 24 ರಂದು ಸಚಿವ ಆರ್. ಅಶೋಕ್ ಭೇಟಿ ವೇಳೆ ಫೋನ್ನಲ್ಲಿ ಸಚಿವ ಅಶೋಕ್ ಪಿಎ ಗಂಗಾಧರ್ ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಚೆಲುವರಾಜ್ ದೂರು ನೀಡಿದ್ರು. ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯದಿಂದ ಸೂಚನೆ ನೀಡಿದ್ದು, ಶೃಂಗೇರಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಸರಣಿ ರಸ್ತೆ ಅಪಘಾತದಲ್ಲಿ 10 ಮಂದಿ ದುರ್ಮರಣ: ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಯೋಗಿ
Last Updated : Jan 30, 2021, 1:51 PM IST