ಚಿಕ್ಕಮಗಳೂರು :ಇಲ್ಲಿನ ದತ್ತಪೀಠದ ಹೋಮ ಮಂಟಪದಲ್ಲಿ ಮಾಂಸಾಹಾರ ಅಡುಗೆ ಮಾಡಿ ಸೇವಿಸಲಾಗಿದೆ. ಇಲ್ಲಿ ಹಿಂದೂ ಮತ್ತು ಮುಸ್ಲಿಂರ ಧಾರ್ಮಿಕ ಆಚರಣೆ ಜಾಗ ಎಂದು ಘೋಷಿಸಿ ಕೋರ್ಟ್ ಆದೇಶ ಈ ಹಿಂದೆ ನೀಡಿದೆ. ಹಿಂದೂಗಳಿಗಾಗಿ ಹೋಮ ಮಾಡಲು ಶೆಡ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ, ಬಂದ ಪ್ರವಾಸಿಗರ ಹೋಮಕ್ಕೆ ಮಾಡಿದ್ದ ಜಾಗದಲ್ಲಿ ಮಾಂಸಾಹಾರ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಯ ಮುಖಂಡರು ಆರೋಪ ಮಾಡುತ್ತಿದ್ದಾರೆ.
ರಕ್ಷಣೆಗಾಗಿ ಅಧಿಕಾರಿಗಳನ್ನು ನೇಮಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ದೂರು ನೀಡಿದ ನಂತರ ಕಾಟಾಚಾರಕ್ಕೆ ಹೋಮ ಶಾಲೆಯ ಅಡ್ಡಲಾಗಿ ಯಾರು ಹೋಗದಂತೆ ಕಟ್ಟಲಾಗಿದೆ. ಆದರೆ, ಅಲ್ಲಿ ಮಾಂಸಾಹಾರ ಮಾಡಿದ ವಿಡಿಯೋಗಳು ಹರಿದಾಡುತ್ತಿವೆ ಎಂದು ಆರೋಪಿಸಿದ್ದಾರೆ.