ಕರ್ನಾಟಕ

karnataka

ನೆರೆ ಪರಿಹಾರ ವಿಳಂಬ: ಚಿಕ್ಕಮಗಳೂರಲ್ಲಿ ರೈತ ಆತ್ಮಹತ್ಯೆ

By

Published : Oct 3, 2019, 1:15 PM IST

ನೆರೆ ಪರಿಹಾರ ವಿಳಂಬ ಆಗುತ್ತಿರುವ ಹಿನ್ನೆಲೆ, ಮಲೆನಾಡಿನಲ್ಲಿ ಸಂತ್ರಸ್ತ ರೈತರ ಆತ್ಮಹತ್ಯೆ ಮುಂದುವರೆದಿದೆ.

ನೆರೆ ಪರಿಹಾರ ವಿಳಂಬ: ಮುಂದುವರೆದ ರೈತರ ಆತ್ಮಹತ್ಯೆ!

ಚಿಕ್ಕಮಗಳೂರು:ಈ ಬಾರಿ ಮಳೆಯ ರೌದ್ರ ನರ್ತನಕ್ಕೆ ಜಿಲ್ಲೆಯ ರೈತರು ಅಕ್ಷರಶಹ ನಲುಗಿದ್ದಾರೆ. ನೆರೆ ಪರಿಹಾರ ವಿಳಂಬ ಆಗುತ್ತಿರುವ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗಳಿಂದ ನೊಂದ ಸಂತ್ರಸ್ತ ರೈತರ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಎಸ್.ಕೆ. ಮೇಗಲ್ ಗ್ರಾಮದ ವಿಷ ಸೇವಿಸಿ ಚಂದ್ರೇಗೌಡ(55) ಎಂಬ ರೈತ ಸಾವಿಗೆ ಶರಣಾಗಿದ್ದಾನೆ. ಮಳೆಯಿಂದ ಈ ರೈತನ ಒಂದು ಎಕರೆ ಗದ್ದೆ ಕೊಚ್ಚಿಕೊಂಡು ಹೋಗಿದ್ದು, ಹಾನಿಯಾಗಿದ್ದ ಗದ್ದೆ-ತೋಟವನ್ನು ಸರಿ ಮಾಡಲು ಕೈ ಸಾಲ ಕೂಡ ಮಾಡಿಕೊಂಡಿದ್ದರು ಎನ್ನಲಾಗ್ತಿದೆ.

ಸರ್ಕಾರದಿಂದ ಇನ್ನೂ ಪರಿಹಾರ ಸಿಗದ ಕಾರಣ, ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details