ಚಿಕ್ಕಮಗಳೂರು: ನಾಲ್ಕು ವರ್ಷಗಳ ಬಳಿಕ ಚಿಕ್ಕಮಗಳೂರು ನಗರಕ್ಕೆ ದತ್ತಾತ್ರೇಯ ವಿಗ್ರಹವನ್ನು ಅದ್ದೂರಿಯಾಗಿ ಕರೆ ತರಲಾಗಿದೆ. ನಾಲ್ಕು ವರ್ಷದ ಹಿಂದೆ ಶೋಭಾಯಾತ್ರೆಗೆ ಅನುಮತಿ ನೀಡದೇ ಜಿಲ್ಲಾಡಳಿತ ದತ್ತಾತ್ರೇಯ ವಿಗ್ರಹವನ್ನು ವಶಕ್ಕೆ ಪಡೆದಿತ್ತು. ಬಳಿಕ ಕಾಳಿ ಮಠದಲ್ಲಿ ದತ್ತ ವಿಗ್ರಹವನ್ನು ಇಡಲಾಗಿತ್ತು. ಈ ಬಾರಿಯ ದತ್ತಮಾಲಾ ಅಭಿಯಾನದಲ್ಲಿ ಶೋಭಾಯಾತ್ರೆಗಾಗಿ ವಿಗ್ರಹ ಆಗಮಿಸಿದ್ದು, ಪೊಲೀಸರ ಬೆಂಗಾವಲಿನಲ್ಲಿ ಚಿಕ್ಕಮಗಳೂರು ನಗರಕ್ಕೆ ಆಗಮನವಾಗಿದೆ.
ನಾಲ್ಕು ವರ್ಷದ ಬಳಿಕ ಚಿಕ್ಕಮಗಳೂರಿಗೆ ದತ್ತಾತ್ರೇಯ ವಿಗ್ರಹ ಆಗಮನ.. - ಚಿಕ್ಕಮಗಳೂರಿನಲ್ಲಿ ದತ್ತಾತ್ರೇಯ ವಿಗ್ರಹ ಶೋಭಾಯಾತ್ರೆ
ನ.13ರಂದು ಚಿಕ್ಕಮಗಳೂರಿನಲ್ಲಿ ದತ್ತಾತ್ರೇಯ ವಿಗ್ರಹ ಶೋಭಾಯಾತ್ರೆ ಮಾಡಲಾಗುತ್ತಿದ್ದು, ಇಂದು ನಗರಕ್ಕೆ ದತ್ತ ವಿಗ್ರಹವನ್ನು ತರಲಾಗಿದೆ.
![ನಾಲ್ಕು ವರ್ಷದ ಬಳಿಕ ಚಿಕ್ಕಮಗಳೂರಿಗೆ ದತ್ತಾತ್ರೇಯ ವಿಗ್ರಹ ಆಗಮನ.. Kn_ckm](https://etvbharatimages.akamaized.net/etvbharat/prod-images/768-512-16883688-thumbnail-3x2-vny.jpg)
ಚಿಕ್ಕಮಗಳೂರಿಗೆ ದತ್ತಾತ್ರೇಯ ವಿಗ್ರಹ ಆಗಮನ
ನವೆಂಬರ್ 13 ರಂದು ಶೋಭಾಯಾತ್ರೆಯಲ್ಲಿ ಮೆರವಣಿಗೆ ಮಾಡಲು ಶ್ರೀ ರಾಮ ಸೇನೆ ಸಂಘಟನೆ ತಯಾರಿ ಮಾಡಿ ಕೊಂಡಿದ್ದು, ಜಿಲ್ಲೆಯಲ್ಲಿ 18 ನೇ ವರ್ಷದ ದತ್ತಮಾಲಾ ಅಭಿಯಾನ ನಡೆಯುತ್ತಿದೆ.
ಇದನ್ನೂ ಓದಿ:ವಾಯುಪಡೆ ಸೇರುವವರಿಗೆ ಸುವರ್ಣವಕಾಶ: ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ ಆಹ್ವಾನ