ಕರ್ನಾಟಕ

karnataka

ETV Bharat / state

ಪೆಟ್ರೋಲ್ ಬಾಂಬ್ ಮಾಹಿತಿ ಬಗ್ಗೆ ತನಿಖೆ ನಡೆಯುತ್ತಿದೆ: ಸಚಿವ ಸಿ.ಟಿ.ರವಿ - ಪೆಟ್ರೋಲ್ ಬಾಂಬ್​ ಬಗ್ಗೆ ತನಿಖೆ

ಪೆಟ್ರೋಲ್ ಬಾಂಬ್ ಮಾಹಿತಿ ಬಗ್ಗೆ ಪೊಲೀಸರು ತನಿಖೆ ಮಾಡುತ್ತಾರೆ. ನಾನು ಈ ವಿಚಾರವಾಗಿ ಪೋಲಿಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

CT Ravi latest news, ಪೆಟ್ರೋಲ್ ಬಾಂಬ್ ಮಾಹಿತಿ ಬಗ್ಗೆ ತನಿಖೆ ನಡೆಯುತ್ತಿದೆ
ಸಿ.ಟಿ.ರವಿ

By

Published : Jan 13, 2020, 8:07 PM IST

ಚಿಕ್ಕಮಗಳೂರು: ಶೃಂಗೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಲಾಗುತ್ತಿತ್ತು ಎಂದು ಹೇಳಲಾದ ಪೆಟ್ರೋಲ್ ಬಾಂಬ್ ದಾಳಿ ಬಗ್ಗೆ ಪೊಲೀಸರಿಗೆ ಮಾಹಿತಿ ಇರಬೇಕು. ಯಾರು ಕಾನೂನನ್ನು ಕೈಗೆ ಎತ್ತಿಕೊಳ್ಳುವ ಅವಕಾಶ ಕೊಟ್ಟಿಲ್ಲ. ಜಿಲ್ಲಾಡಳಿತ ತುಂಬಾ ಜವಾಬ್ದಾರಿಯುತವಾಗಿ ವರ್ತನೆ ಮಾಡಿದೆ. ಜವಾಬ್ದಾರಿಯಿಂದ ಕೆಲಸ ಮಾಡದಿದ್ದರೆ ಸ್ವರೂಪವೇ ಬದಾಲಾಗುತ್ತಿತ್ತು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಪೆಟ್ರೋಲ್ ಬಾಂಬ್ ಮಾಹಿತಿ ಬಗ್ಗೆ ಪೊಲೀಸರು ತನಿಖೆ ಮಾಡುತ್ತಾರೆ. ನಾನು ಈ ವಿಚಾರವಾಗಿ ಪೋಲಿಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ. ಪೋಲಿಸರಿಗೆ ಮಾಹಿತಿ ಸಿಕ್ಕ ನಂತರ ಸ್ಥಳಕ್ಕೆ ಹೋಗಿದ್ದಾರೆ. ಪೆಟ್ರೋಲ್ ಬಾಟಲಿಗಳು ಸಿಕ್ಕಿವೆ, ಆದರೆ ಯಾರು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಇಲ್ಲಿ ವಿಶ್ಲೇಷಣೆ ಯಾವ ರೀತಿ ಬೇಕಾದರೂ ಮಾಡಬಹುದು. ಸಾಕ್ಷಿಗಳು ಸಿಕ್ಕಿಲ್ಲ, ಸಾಕ್ಷಿಗಳು ಸಿಕ್ಕರೆ ತನಿಖೆ ನಡೆಸುತ್ತಾರೆ ಎಂದಿದ್ದಾರೆ.

ಸಿ.ಟಿ.ರವಿ,ಸಚಿವ

ಕನ್ನಡದ ಹಬ್ಬ ಜನರನ್ನು ಒಳಗೊಳ್ಳಬೇಕಾ ಅಥವಾ ಕೆಲ ಜನರ ಸಮ್ಮಖದಲ್ಲಿ ನಡೆಯಬೇಕಾ? ಕನ್ನಡ ಪರಿಷತ್ ಸಮ್ಮೇಳನಗಳು ತಳಿರು ತೋರಣ ಕಟ್ಟಿ ನಡೆದಿರೋದನ್ನು ನೋಡಿದ್ದೇನೆ. ದಿನಾಂಕ ಮುಂದೂಡಿ ಅಂತ ಹೇಳಿದರೂ ಕೂಡ ಅವರು ತೀರ್ಮಾನ ತೆಗೆದಕೊಂಡಿಲ್ಲ. ಅದನ್ನೇ ಸ್ವಾತಂತ್ರ್ಯ ಹೋರಾಟ ಅಂದು ಕೊಂಡರೇ ನನ್ನ ತಕರಾರು ಇಲ್ಲ. ನನ್ನ ಮನೆಗೆ ಬಂದಾಗಲೂ ಕೂಡ ಕಾರ್ಯಕ್ರಮ ಮುಂದೂಡಿ ಎಂದೂ ಹೇಳಿದ್ದೆ ಎಂದಿದ್ದಾರೆ. ನಕ್ಸಲ್ ಬರುವಿಕೆಗೆ ಕಲ್ಕುಳಿ ವಿಠಲ್ ಹೆಗ್ಡೆ ಕಾರಣ ಎಂಬುದು ನನ್ನ ಆತ್ಮ ಸಾಕ್ಷಿಗೆ ಗೊತ್ತಿದೆ. ಅದು ಅವರಿಗೂ ಗೊತ್ತಿದೆ. ಬೇರೆ ಬೇರೆ ಕಾರಣದಿಂದಾ ಅವರ ಆಯ್ಕೆ ವಿವಾದ ಸ್ವರೂಪ ಪಡೆಯಿತು ಎಂದಿದ್ದಾರೆ.

ಸಾವರ್ಕರ್ ಅವರ ಪ್ರೇರಣೆ ನಾನು ವ್ಯಕ್ತಿಗತವಾಗಿ ಪಡೆದಿದ್ದೇನೆ. ಯಾರು ಮಾರ್ಕ್ಸ್, ಲೆನಿನ್ ಮೇಲೆ ನಂಬಿಕೆ ಇಟ್ಟಿರುತ್ತಾರೆ ಅವರಿಗೆ ಸಾವರ್ಕರ್ ಅರ್ಥ ಆಗೋಲ್ಲ. ಇವರ ರಾಷ್ಟ್ರದ ಕಲ್ಪನೆ ಮಾವೋ, ಲೆನಿನ್ ಪ್ರೇರಿತ. ಮುಂದಿನ ಜನ್ಮದಲ್ಲಿಯೂ ಅರ್ಥ ಆಗುವ ಸಾಧ್ಯತೆ ಇಲ್ಲ. ದುರುದ್ದೇಶ ಪೂರ್ವಕವಾಗಿ ವಿವಾದ ಮಾಡಿದರೆ ಜನರೇ ಅದನ್ನು ದೂರ ಮಾಡುತ್ತಾರೆ. ಅತಿರೇಕದ ವರ್ತನೆ ಹೋಗಬಾರದು ಎಂದು ನಾನೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೆ ಎಂದಿದ್ದಾರೆ.

ವೈಚಾರಿಕ ವಿರೋಧ ನಾನು ಸ್ವಾಗತಿಸುತ್ತೇನೆ. ಸಂವಿಧಾನ ಧಿಕ್ಕರಿಸುವದು, ಕಾನುನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ನಕ್ಸಲರು ವ್ಯಕ್ತಿಯನ್ನು ಕೊಂದರೆ ನಗರ ನಕ್ಸಲು ಮಾನಸಿಕತೆಯನ್ನು ಕೊಲ್ಲುತ್ತಾರೆ ಎಂದಿದ್ದಾರೆ.

ABOUT THE AUTHOR

...view details