ಕರ್ನಾಟಕ

karnataka

ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದ ಬೈಕ್​: ಸಿಆರ್​ಪಿಎಫ್​ ಯೋಧ ಸಾವು

By

Published : Dec 18, 2019, 11:49 PM IST

ನಿನ್ನೆ ರಾತ್ರಿ ಸಖರಾಯ ಪಟ್ಟಣಕ್ಕೆ ಹೋಗಿ ಬರುವ ವೇಳೆ ತಡರಾತ್ರಿ ರಸ್ತೆ ಸರಿಯಾಗಿ ಕಾಣದೇ ರಸ್ತೆ ಪಕ್ಕದಲ್ಲಿರುವ ಸೇತುವೆಗೆ ಬೈಕ್ ಡಿಕ್ಕಿಯಾಗಿ ಸೇತುವೆ ಮೇಲಿಂದಾ ಬಿದ್ದು ಯೋಧ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

CRPF soldier dies
ಸಿಆರ್​ಪಿಎಫ್​ ಯೋಧ ಸಾವು

ಚಿಕ್ಕಮಗಳೂರು:ಮಂಗಳವಾರ ರಾತ್ರಿ ಬೈಕ್​ನಲ್ಲಿ ಮನೆಗೆ ಹೋಗುವಾಗ ಬೈಕ್​ನ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದು ಯೋಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬೈಕ್​ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದು ಸಿಆರ್​ಪಿಎಫ್​ ಯೋಧ ಸಾವು

ಸಿಆರ್​ಪಿಎಫ್​ ಯೋಧ ಚಿದಾನಂದ್ (27) ಮೃತರು. ಕಡೂರು ತಾಲೂಕಿನ ಸಖರಾಯಪಟ್ಟಣದ ಹೊರ ವಲಯದಲ್ಲಿರುವ 173 ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಸಖರಾಯಪಟ್ಟಣದ ಬಾಳೇನಹಳ್ಳಿ ನಿವಾಸಿಯಾಗಿದ್ದಾರೆ.

ಮಂಗಳವಾರ ರಾತ್ರಿ ಸಖರಾಯ ಪಟ್ಟಣಕ್ಕೆ ಹೋಗಿ ಬರುವ ವೇಳೆ ತಡರಾತ್ರಿ ರಸ್ತೆ ಸರಿಯಾಗಿ ಕಾಣದೇ ರಸ್ತೆ ಪಕ್ಕದಲ್ಲಿರುವ ಸೇತುವೆಗೆ ಬೈಕ್ ಡಿಕ್ಕಿಯಾಗಿ ಸೇತುವೆ ಮೇಲಿಂದ ಬಿದ್ದು ಯೋಧ ಮೃತಪಟ್ಟಿದ್ದಾರೆ. ಈ ಘಟನೆ ಯಾರಿಗೂ ತಿಳಿದಿರಲಿಲ್ಲ. ಆದರೇ ಚಿದಾನಂದ್ ಮನೆಯವರು ಅವರ ಮೊಬೈಲ್​ಗೆ ಕರೆ ಮಾಡುತ್ತಲೇ ಇದ್ದರೂ ಫೋನ್ ರಿಂಗ್ ಆಗುತ್ತಿತ್ತು. ಆದರೇ ಫೋನ್ ಸ್ವೀಕರಿಸುತ್ತಿರಲಿಲ್ಲ. ಸಖರಾಯ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧನಾಗಿ ಸಿಆರ್​ಪಿಎಫ್​ ನಲ್ಲಿ ಚಿದಾನಂದ್ ಕಾರ್ಯ ನಿರ್ವಹಿಸುತ್ತಿದ್ದು, ರಜೆ ಕಳೆಯಲು ಊರಿಗೆ ಬಂದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸದ್ಯ ಮೃತ ದೇಹವನ್ನು ಚಿಕ್ಕಮಗಳೂರಿನ ಜಿಲ್ಲಾಸ್ವತ್ರೆಗೆ ರವಾನಿಸಲಾಗಿದೆ. ಸಖರಾಯ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details