ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್: ಕೇರಳ ಪ್ರವಾಸಿಗರನ್ನು ಕಾಫಿನಾಡಿಗೆ ಬರದಂತೆ ನಿರ್ಬಂಧಿಸಿ... ಡಿಸಿಗೆ ಮನವಿ - ಕರೋನ ವೈರಸ್ ಹರಡದಂತೆ ತಡೆಗಟ್ಟಲು ವಿಶ್ವದಾದ್ಯಂತ

ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನಲೆ ಜಿಲ್ಲೆಗೆ ಪ್ರವಾಸಕ್ಕೆಂದು ಆಗಮಿಸುವ ಕೇರಳ ಪ್ರವಾಸಿಗರನ್ನು ಕೂಡಲೇ ನಿರ್ಬಂಧಿಸಬೇಕೆಂದೂ ಆಗ್ರಹಿಸಿ ಶ್ರೀ ರಾಮ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್​ರಿಗೆ ಮನವಿ ಸಲ್ಲಿಸಿದರು.

Kn_Ckm_02_Dc_Manavi_av_7202347
ಕರೋನ ವೈರಸ್: ಕೇರಳ ಪ್ರವಾಸಿಗರನ್ನು ಕಾಫಿನಾಡಿಗೆ ಬರದಂತೆ ನಿರ್ಬಂಧಿಸಿ, ಶ್ರೀ ರಾಮ ಸೇನೆಯಿಂದ ಡಿಸಿಗೆ ಮನವಿ

By

Published : Feb 7, 2020, 6:17 AM IST

ಚಿಕ್ಕಮಗಳೂರು:ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನಲೆ ಜಿಲ್ಲೆಗೆ ಪ್ರವಾಸಕ್ಕೆಂದು ಆಗಮಿಸುವ ಕೇರಳ ಪ್ರವಾಸಿಗರನ್ನು ಕೂಡಲೇ ನಿರ್ಭಂಧಿಸಬೇಕು ಎಂದೂ ಆಗ್ರಹಿಸಿ ಶ್ರೀ ರಾಮ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್​ರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಈಗಾಗಲೇ ಚೀನಾ ದೇಶದಲ್ಲಿ ಭಯಾನಕ ಹಾಗೂ ಮಾರಣಾಂತಿಕ ಕಾಯಿಲೆಯಾದ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ವಿಶ್ವದಾದ್ಯಂತ ಮುನ್ನಚ್ಚೆರಿಕೆಯ ಕ್ರಮಗಳನ್ನು ವಹಿಸಲಾಗುತ್ತಿದೆ. ಈ ಭಯಾನಕ ವೈರಸ್ ಭಾರತಕ್ಕೂ ಕಾಲಿಟ್ಟಿರುವುದು ಕಂಡು ಬಂದಿದೆ. ಕೇರಳ ರಾಜ್ಯದಲ್ಲಿ ಹಲವಾರು ಜನರಲ್ಲಿ ಈ ವೈರಸ್ ಪತ್ತೆಯಾಗಿದ್ದು, ತಪಾಸಣೆಯ ವೇಳೆ ದೃಡಪಟ್ಟಿದೆ. ಹಾಗಾಗಿ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆಂದು ಬರುವ ಕೇರಳ ಪ್ರವಾಸಿಗರಿಂದ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಾಗಿರುವ ಹಿನ್ನಲೆ ಮುನ್ನಚ್ಚರಿಕೆಯ ಕ್ರಮವಾಗಿ ಪ್ರವಾಸಿಗರನ್ನು ನಿರ್ಬಂಧಿಸಬೇಕು ಎಂದೂ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಶ್ರೀರಾಮ ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು.

ABOUT THE AUTHOR

...view details