ಕರ್ನಾಟಕ

karnataka

ETV Bharat / state

ಕಾಫಿನಾಡಿನಲ್ಲಿ ಜನಜೀವನ ನಾರ್ಮಲ್‌.. ಕೊರೊನಾ ಇಲ್ಲದೇ ಕೂಲ್‌ ಕೂಲ್‌..

ನಗರದ ಐಜಿ ರಸ್ತೆ, ಎಂಜಿ ರಸ್ತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಪ್ರತಿ ಅಂಗಡಿ-ಮುಗ್ಗಟ್ಟುಗಳು ತೆರೆದಿವೆ. ಎಂದಿನಂತೆ ತಮ್ಮ ನಿತ್ಯದ ಕಾರ್ಯದಲ್ಲಿ ಜನ ತೊಡಗಿದ್ದಾರೆ. ಬೈಕ್​​​​ಗಳು, ಕಾರುಗಳು, ಆಟೋಗಳು ರಸ್ತೆಗಿಳಿದಿವೆ.

By

Published : May 31, 2020, 7:38 PM IST

Clearing the lock down in Chikkamagaluru
ಸಹಜ ಸ್ಥಿತಿಯತ್ತ ಚಿಕ್ಕಮಗಳೂರು

ಚಿಕ್ಕಮಗಳೂರು: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಎರಡು ಭಾನುವಾರ ಸಂಪೂರ್ಣ ಲಾಕ್​​​​ಡೌನ್ ಜಾರಿ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.

ಆದರೆ, ಆ ನಿರ್ಧಾರ ವಾಪಸ್ ಪಡೆದು ಸಿಎಂ ಸೂಚನೆ ಮೇರೆಗೆ ಭಾನುವಾರದ ಕರ್ಫ್ಯೂ ತೆರವು ಮಾಡಲಾಗಿದೆ. ಈ ಭಾನುವಾರ ಚಿಕ್ಕಮಗಳೂರು ಜಿಲ್ಲೆ ಸಹಜ ಸ್ಥಿತಿಯಲ್ಲಿತ್ತು. ಇಂದು ಮುಂಜಾನೆಯಿಂದಲೇ ಜನ ರಸ್ತೆಗಿಳಿಯುವುದರ ಮೂಲಕ ತಮ್ಮ ತಮ್ಮ ಕಾರ್ಯದಲ್ಲಿ ತೊಡಗಿದ್ದಾರೆ.

ಚಿಕ್ಕಮಗಳೂರಿನಲ್ಲಿ ಎಲ್ಲವೂ ಸಹಜ..

ನಗರದ ಐಜಿ ರಸ್ತೆ, ಎಂಜಿ ರಸ್ತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಪ್ರತಿ ಅಂಗಡಿ-ಮುಗ್ಗಟ್ಟುಗಳು ತೆರೆದಿವೆ. ಎಂದಿನಂತೆ ತಮ್ಮ ನಿತ್ಯದ ಕಾರ್ಯದಲ್ಲಿ ಜನ ತೊಡಗಿದ್ದಾರೆ. ಬೈಕ್​​​​ಗಳು, ಕಾರುಗಳು, ಆಟೋಗಳು ರಸ್ತೆಗಿಳಿದಿವೆ.

ಪ್ರಮುಖ ರಸ್ತೆಯಾದ ಎಂಜಿ ರಸ್ತೆಯಲ್ಲಿ ಜನರು ತುಂಬಿ ತುಳುಕುತ್ತಿದ್ದರು. ನಗರ ಪ್ರದೇಶಗಳಲ್ಲಿ ರಸ್ತೆ ಸಂಚಾರಕ್ಕೆ ಪೊಲೀಸರು ಸಂಪೂರ್ಣ ಅನುಕೂಲ ಕಲ್ಪಿಸಿದ್ದರು. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಹಾಕಿದ್ದ ಬ್ಯಾರಿಕೇಡ್​​​​ಗಳನ್ನು ಸಂಪೂರ್ಣ ತೆರವು ಮಾಡಲಾಗಿತ್ತು.

ABOUT THE AUTHOR

...view details