ಕರ್ನಾಟಕ

karnataka

ETV Bharat / state

ಹೆಲ್ಮೆಟ್​​ ಧರಿಸಿದ್ದರೂ ಬೈಕ್​ ಸವಾರನ ತಲೆ ಅಪ್ಪಚ್ಚಿ! - Chikkamagaluru Bike Accident latest news

ಬಸ್ಸಿನ ಟೈರ್​ಗೆ ಸಿಕ್ಕಿ ಬೈಕ್ ಸವಾರನ ತಲೆ ಅಪ್ಪಚ್ಚಿಯಾದ ಭೀಕರ ಘಟನೆ ತಾಲೂಕಿನ ದೇವರಹಳ್ಳಿ ಗೇಟ್ ಬಳಿ ನಡೆದಿದೆ.

ಹೆಲ್ಮೆಟ್ ದರಿಸಿದ್ದರೂ ಉಳಿಯಲಿಲ್ಲ ಪ್ರಾಣ..

By

Published : Oct 28, 2019, 9:16 PM IST

ಚಿಕ್ಕಮಗಳೂರು: ಬಸ್ಸಿನ ಟೈರ್​ಗೆ ಸಿಕ್ಕಿ ಬೈಕ್ ಸವಾರನ ತಲೆ ಅಪ್ಪಚ್ಚಿಯಾದ ಭೀಕರ ಘಟನೆ ತಾಲೂಕಿನ ದೇವರಹಳ್ಳಿ ಗೇಟ್ ಬಳಿ ನಡೆದಿದೆ.

ಹೆಲ್ಮೆಟ್ ದರಿಸಿದ್ದರೂ ಉಳಿಯಲಿಲ್ಲ ಪ್ರಾಣ..

ಚಿಕ್ಕಮಗಳೂರು ತಾಲೂಕಿನ ಕರಿ ಸಿದ್ದನಹಳ್ಳಿ ನಿವಾಸಿ ಸೋಮಶೇಖರ್ (26) ಮೃತಪಟ್ಟವ ಎನ್ನಲಾಗಿದೆ. ಸೋಮಶೇಖರ್ ಬೈಕ್​ನಲ್ಲಿ ಹೋಗುತ್ತಿದ್ದಾಗ ಸರ್ಕಾರಿ ಬಸ್ಸಿಗೆ ಬೈಕ್ ಟಚ್ ಆಗಿದೆ. ಪರಿಣಾಮ ಸೋಮಶೇಖರ್ ರಸ್ತೆಗೆ ಬಿದ್ದಿದ್ದು, ಈ ವೇಳೆ ಬಸ್ಸಿನ ಹಿಂಬದಿ ಟೈರ್​ ತಲೆ ಮೇಲೆ ಹರಿದಿದೆ. ಅಪಘಾತದ ವೇಳೆ ಸೋಮಶೇಖರ್​ ಹೆಲ್ಮೆಟ್ ಹಾಕಿದ್ದರೂ ತಲೆ ಸಂಪೂರ್ಣ ಅಪ್ಪಚ್ಚಿಯಾಗಿದೆ. ಸ್ಥಳದಲ್ಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details