ಕರ್ನಾಟಕ

karnataka

By

Published : Sep 1, 2022, 10:07 PM IST

ETV Bharat / state

ಭೀಕರ ಮಳೆಗೆ ನಲುಗಿ ಹೋದ ಕಾಫಿನಾಡು: ಚಿಕ್ಕಮಗಳೂರಲ್ಲಿ ಆರ್ಭಟಿಸಿದ ವರುಣ

ಚಿಕ್ಕಮಗಳೂರಲ್ಲಿ ಭಾರಿ ಮಳೆ ಆಗಿದೆ. ಪರಿಣಾಮ ಇಲ್ಲಿನ ಜನ ಈ ಮಳೆಗೆ ಭಯಭೀತರಾಗಿದ್ದಾರೆ. ಕೊಪ್ಪ ತಾಲೂಕಿನ ಜಯಪುರದಲ್ಲಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ.

ಭೀಕರ ಮಳೆಗೆ ನಲುಗಿ ಹೋದ ಕಾಫಿನಾಡು
ಭೀಕರ ಮಳೆಗೆ ನಲುಗಿ ಹೋದ ಕಾಫಿನಾಡು

ಚಿಕ್ಕಮಗಳೂರು: ಭೀಕರ ಮಳೆಗೆ ಕಾಫಿನಾಡು ನಲುಗಿ ಹೋಗಿದೆ. ಮುಸ್ಸಂಜೆ ಆಗ್ತಿದ್ದಂತೆ ಜಿಲ್ಲೆಯ ಹಲವೆಡೆ ರಣ ಭೀಕರ ಮಳೆ ಸುರಿದಿದೆ. ಕೊಪ್ಪ ತಾಲೂಕಿನ ಜಯಪುರದಲ್ಲಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ನೋಡ ನೋಡುತ್ತಿದ್ದಂತೆ ನದಿಂತಾದ ರಸ್ತೆಗಳನ್ನು ಕಂಡು ಜನರಿಗೆ ಭೀತಿ ಉಂಟಾಗಿತ್ತು. ಎರಡೇ ಎರಡು ಗಂಟೆ ಸುರಿದ ರಣ ಮಳೆಗೆ ಮಲೆನಾಡು ಅಲ್ಲೋಲ - ಕಲ್ಲೋಲ ಸೃಷ್ಟಿಯಾಗಿತ್ತು. ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಭೀಕರ ಮಳೆಗೆ ನಲುಗಿ ಹೋದ ಕಾಫಿನಾಡು

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ, ಕೊಪ್ಪ, ಶೃಂಗೇರಿಯಲ್ಲಿ ಮಳೆಯ ಅಬ್ಬರಕ್ಕೆ ಜನ ಜೀವನ ನಲುಗಿ ಹೋಗಿದೆ. ಮನೆಗಳು ಜಲಾವೃತಗೊಂಡಿವೆ. ಸುಮಾರು ಏಳು ಇಂಚಿನಷ್ಟು ಮಳೆ ಮಲೆನಾಡಿಗರನ್ನ ಹೈರಾಣಾಗಿಸಿದೆ. ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ಸುರಿದ ಮಳೆಗೆ ನೀರು ರಸ್ತೆಯಲ್ಲಿ ಎರಡ್ಮೂರು ಅಡಿ ಎತ್ತರದಲ್ಲಿ ನದಿಯಂತೆ ಹರಿದಿದೆ. ಗುಡ್ಡಗಾಡು ಪ್ರದೇಶದಲ್ಲಿ ಧಾರಾಕಾರವಾಗಿ ಸುರಿದ ಮಳೆ ನೀರು ಮಣ್ಣಿನ ಜೊತೆ ನುಗ್ಗಿ ಜಯಪುರ ಪಟ್ಟಣದ ಅಕ್ಷರಶಃ ಜಲಾವೃತಗೊಂಡಿದೆ.

ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮದ ಬಳಿ ಭಾರಿ ಮಳೆಗೆ ಕಳೆದ ನಾಲ್ಕು ದಿನಗಳ ಹಿಂದಷ್ಟೆ ನಾಟಿ ಮಾಡಿದ್ದ ಬತ್ತದ ಗದ್ದೆ ಮಳೆ ನೀರಲ್ಲಿ ಕೊಚ್ಚಿ ಹೋಗಿವೆ. ಹತ್ತಾರು ಎಕರೆ ಕಾಫಿ, ಅಡಿಕೆ ತೋಟ ಕೂಡ ಮಳೆ ನೀರಿನಲ್ಲಿ ಜಲಾವೃತಗೊಂಡಿದೆ. ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ಮಳೆ ನೀರು ತಗ್ಗುಪ್ರದೇಶಗಳಿಗೆ ನುಗ್ಗಿದ ಪರಿಣಾಮ ನೀರನ್ನ ಹೊರಹಾಕಲು ಸ್ಥಳಿಯರು ಹರ ಸಾಹಸ ಪಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನ ಸ್ಥಗಿತಗೊಳಿಸಲಾಗಿದೆ.

ಕಳೆದ ಎರಡು ದಶಕಗಳಲ್ಲೇ ಈ ಮಳೆಯು ದಾಖಲೆ ಬರೆದಿದೆ. ಧಾರಾಕಾರ ಮಳೆಯಿಂದ ಬೆಟ್ಟಗುಡ್ಡಗಳ ಅಂಚಿನ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಮೂಡಿಗೆರೆಯಲ್ಲೂ ಭಾರೀ ಮಳೆ ಸುರಿದು ಮೇಗಲ್‍ಪೇಟೆಯಲ್ಲಿ ನಾಲ್ಕು ಮನೆಗಳಿಗೆ ನೀರು ನುಗ್ಗಿದೆ. ನೀರು ನುಗ್ಗಿದ ಪರಿಣಾಮ ಮನೆಯವರು ನೀರನ್ನ ಹೊರ ಹಾಕಲು ಹರಸಾಹನ ಪಟ್ಟಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಕಂಬಳಿ ಹುಳುಗಳ ಕಾಟ.. ಕಂಗಾಲಾದ ರೈತ

ABOUT THE AUTHOR

...view details