ಕರ್ನಾಟಕ

karnataka

By

Published : Apr 18, 2021, 6:12 PM IST

ETV Bharat / state

ಕೊರೊನಾಬ್ಬರಕ್ಕೆ ಚಿಂತಾಕ್ರಾಂತರಾದ ಕಾಫಿ ನಾಡಿನ ಜನ... ಪ್ರವಾಸಿಗರನ್ನು ತಡೆಯುವಂತೆ ಜಿಲ್ಲಾಡಳಿತಕ್ಕೆ ಮನವಿ

ವಾರಾಂತ್ಯ ಬಂದರೆ ಸಾಕು ಜಿಲ್ಲೆಯ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರ ದಂಡೇ ಬರುತ್ತದೆ. ಹೀಗೆ ಚಾರಣಕ್ಕೆ ಬರುವ ಕೆಲವರು ಸರ್ಕಾರದ ನಿಯಮದಂತೆ ಕೊರೊನಾ ರಿಪೋರ್ಟ್​ ತಂದರೆ, ಇನ್ನು ಕೆಲವರು ಹಾಗೆಯೇ ಬರುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 400 ಆಕ್ಟೀವ್​ ಕೇಸ್​ ಇರುವುದರಿಂದ ಸಹಜವಾಗಿಯೇ ಜನರು ಆತಂಕಕ್ಕೀಡಾಗಿದ್ದಾರೆ.

chikkamagalore
ಚಿಕ್ಕಮಗಳೂರು

ಚಿಕ್ಕಮಗಳೂರು:ದೇಶದಲ್ಲಿ ಕೊರೊನಾ 2ನೇ ಅಲೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಭಯಭೀತರಾಗಿರುವ ಜಿಲ್ಲೆಯ ಜನರು, ಪ್ರವಾಸಿಗರ ಪ್ರವೇಶವನ್ನು ತಡೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೊರೊನಾ 2ನೇ ಅಲೆಗೆ ಸಿಲುಕಿರುವ ಕರ್ನಾಟಕ ಡೇಂಜರ್ ಝೋನ್​ ತಲುಪಿದೆ. ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ ಸೇರಿದಂತೆ ಕೆಲ ಜಿಲ್ಲೆಗಳು ಅಪಾಯದ ಹಂತ ತಲುಪಿವೆ. ನಮಗೆ ಆ ಸ್ಥಿತಿ ಬರಬಾರದು ಅಂತ ಈಗಾಗಲೇ ಅಲರ್ಟ್ ಆಗಿರುವ ಜಿಲ್ಲೆಯ ಜನರು, ಹೊರ ರಾಜ್ಯದಿಂದ ಬರುವ ಪ್ರವಾಸಿಗರನ್ನು ತಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪ್ರವಾಸಿಗರನ್ನು ತಡೆಯುವಂತೆ ಸ್ಥಳೀಯರಿಂದ ಒತ್ತಾಯ

ಮಳೆಗಾಲ ಆರಂಭವಾಗುತ್ತಿದೆ. ಇಲ್ಲೂ ಕೂಡ ಇತರೆ ಜಿಲ್ಲೆಗಳಂತಹ ಸ್ಥಿತಿ ನಿರ್ಮಾಣವಾದ್ರೆ ನಿಯಂತ್ರಣ ಅಸಾಧ್ಯವಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಕೂಡಲೇ 15 ದಿನದ ಮಟ್ಟಿಗಾದರೂ ಪ್ರವಾಸಿಗರನ್ನ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಎಂತದ್ದೇ ಸ್ಥಿತಿ ಬಂದರೂ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರಾಂತ್ಯ ಬಂದರೆ ಸಾಕು ಜಿಲ್ಲೆಯ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರ ದಂಡೇ ಬರುತ್ತದೆ. ಹೀಗೆ ಚಾರಣಕ್ಕೆ ಬರುವ ಕೆಲವರು ಸರ್ಕಾರದ ನಿಯಮದಂತೆ ಕೊರೊನಾ ರಿಪೋರ್ಟ್​ ತಂದರೆ, ಇನ್ನು ಕೆಲವರು ಹಾಗೆಯೇ ಬರುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 400 ಆಕ್ಟೀವ್​ ಕೇಸ್​ ಇರುವುದರಿಂದ ಸಹಜವಾಗಿಯೇ ಜನರು ಆತಂಕಕ್ಕೀಡಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ ಸುಮಾರು 141 ಜನ ಮೃತಪಟ್ಟಿದ್ದಾರೆ. 450 ಆ್ಯಕ್ಟೀವ್ ಕೇಸ್ ಇವೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಸದ್ಯಕ್ಕೆ ಕಾಫಿನಾಡು ಶಾಂತವಾಗಿದೆ. ಹಾಗಾಗಿ, ಸದ್ಯದ ಮಟ್ಟಿಗಾದರೂ ಪ್ರವಾಸಿಗರನ್ನು ತಡೆಹಿಡಿಯುವುದು ಸೂಕ್ತ ಎಂಬುದು ಸಾರ್ವಜನಿಕರ ನಿಲುವಾಗಿದೆ.

ಓದಿ: ಪ್ರಚಾರಕ್ಕೆ ತೆರಳಿ ಸೋಂಕಿಗೊಳಗಾದ ರಾಜಕಾರಣಿಗಳು ಗುಣಮುಖವಾಗಲಿ.. ಲಾಕ್‌ಡೌನ್‌ ಬೇಡ ಅಂತಾರೆ ವಾಟಾಳ್

ABOUT THE AUTHOR

...view details