ಕರ್ನಾಟಕ

karnataka

ETV Bharat / state

ಪ್ಲಾಸ್ಟಿಕ್​ ತಿಂದು ದನಗಳ ಸಾವು: ಬಜರಂಗದಳ ಕಳವಳ

ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿಯ ಹೊರವಲಯದಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸರಿಯಾದ ಗೋಡೆ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಜಾನುವಾರುಗಳು ಬಂದು ಇಲ್ಲಿ ಬಿದ್ದಿರುವ ಪ್ಲಾಸ್ಟಿಕ್​ಗಳನ್ನು ತಿಂದು ಸಾವನ್ನಪ್ಪುತ್ತಿವೆ ಎಂದು ಬಜರಂಗದಳ ಕಿಡಿಕಾರಿದೆ.

By

Published : Jun 17, 2020, 2:54 PM IST

Cattles were Dying by eating of waste plastics
ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್​ ತಿನ್ನುತ್ತಿರುವ ಜಾನುವಾರಗಳು

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ಹೊರವಲಯದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಾನುವಾರುಗಳು ಪ್ಲಾಸ್ಟಿಕ್ ಹಾಗೂ ಪೇಪರ್ ವಸ್ತುಗಳನ್ನು ತಿಂದು ಸಾವನ್ನಪ್ಪುತ್ತಿವೆ ಎಂದು ಲಿಂಗದಹಳ್ಳಿ ಬಜರಂಗದಳದ ಕಾರ್ಯಕರ್ತರು ಆರೋಸಿದ್ದಾರೆ.

ಲಿಂಗದಹಳ್ಳಿಯ ಹೊರವಲಯದ ಹತ್ತಾರು ಎಕರೆ ವಿಶಾಲ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಲಾಗಿದ್ದು, ಈ ಘಟದಕಲ್ಲಿ ಎಲ್ಲ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಸುತ್ತ ಮುತ್ತಲ ಪ್ರದೇಶದ ಜಾನುವಾರುಗಳು ಇಲ್ಲಿನ ಪ್ಲಾಸ್ಟಿಕ್ ಹಾಗೂ ಇತರ ಹಾನಿಕಾರಕ ವಸ್ತುಗಳನ್ನು ತಿನ್ನುವ ಮೂಲಕ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದು, ಈಗಾಗಲೇ ಹಲವಾರು ಜಾನುವಾರುಗಳು ಹಾಗೂ ಶ್ವಾನಗಳು ಮೃತಪಟ್ಟಿವೆ ಎಂದು ಬಜರಂಗದಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್​ ತಿನ್ನುತ್ತಿರುವ ಜಾನುವಾರಗಳು

ಇನ್ನು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಪ್ರಸ್ತುತ ಈ ಘಟಕದಲ್ಲಿ ತಂತಿ ಬೇಲಿ ನಿರ್ಮಾಣ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ, ಜಾನುವಾರುಗಳು ಸಲೀಸಾಗಿ ಒಳಗೆ ಬಂದು ಪ್ಲಾಸ್ಟಿಕ್ ತಿಂದು ಸಾವನ್ನಪ್ಪುತ್ತಿವೆ ಎಂದು ಬಜರಂಗದಳ ಆರೋಪಿಸಿದೆ.

ಈ ಘಟಕದಲ್ಲೇ ತಂತಿ ಬೇಲಿ ಬದಲಾಗಿ ಸುತ್ತಲೂ ಸಿಮೆಂಟ್ ಗೋಡೆ ಕಟ್ಟಿದರೆ ಮಾತ್ರ ಜಾನುವಾರುಗಳು ಒಳಗೆ ಪ್ರವೇಶಿಸಿಲು ಸಾಧ್ಯವಿಲ್ಲ. ಆದ್ದರಿಂದ ಅತೀ ಶೀಘ್ರವಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಜಾನುವಾರುಗಳ ಪ್ರಾಣವನ್ನು ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.

For All Latest Updates

ABOUT THE AUTHOR

...view details