ಕರ್ನಾಟಕ

karnataka

ETV Bharat / state

ಎಸ್​ಡಿಪಿಐ, ಪಿ.ಎಫ್.ಐ ಚಟುವಟಿಕೆ ತಾಲಿಬಾನ್​ನ ಪ್ರಾಥಮಿಕ ಹಂತದಂತಿದೆ : ಸಿ.ಟಿ.ರವಿ - ತಾಲಿಬಾನಿಗಳಿಂದ ಮೊದಲು ಬ್ರೈನ್ ವಾಶ್

ತಾಲಿಬಾನಿಗಳು ಮೊದಲು ಬ್ರೈನ್ ವಾಶ್ ಮಾಡುತ್ತಾರೆ, ಆಮೇಲೆ ಕೈಗೆ ಬಂದೂಕು ಕೊಡುತ್ತಾರೆ, ಅಫ್ಘಾನಿಸ್ತಾನದಲ್ಲೂ ಅವರು ಮಾಡಿದ್ದು ಇದೇ ಕೆಲಸ, ಈಗ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಕೂಡ ಮಾಡುತ್ತಿರೋದು ಇದನ್ನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

c t-ravi
ಸಿ.ಟಿ.ರವಿ

By

Published : Jan 28, 2020, 3:58 AM IST

ಚಿಕ್ಕಮಗಳೂರು: ತಾಲಿಬಾನಿಗಳು ಮೊದಲು ಬ್ರೈನ್ ವಾಶ್ ಮಾಡುತ್ತಾರೆ, ಆಮೇಲೆ ಕೈಗೆ ಬಂದೂಕು ಕೊಡುತ್ತಾರೆ, ಅಫ್ಘಾನಿಸ್ತಾನದಲ್ಲೂ ಅವರು ಮಾಡಿದ್ದು ಇದೇ ಕೆಲಸ, ಈಗ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಕೂಡ ಮಾಡುತ್ತಿರೋದು ಇದನ್ನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಸಿ.ಟಿ.ರವಿ

ಜಿಲ್ಲೆಯ ಕಡೂರಿನಲ್ಲಿ ಮಾತನಾಡಿದ ಅವರು, ಸಿಮಿ ನಿಷೇಧಕ್ಕೂ ಮೊದಲು ಅವರ ಕಾರ್ಯಾಲಯ ರೈಡ್ ಆಗಿತ್ತು. ಅವರ ಕಾರ್ಯಾಲಯದಲ್ಲಿ ಮೊಘಲ್ ಸಂಸ್ಥಾನದ ಭೂಪಟ ಹಾಗೂ ಮೊಘಲ್ ಸ್ಥಾನದ ಹೆಸರಿತ್ತು. ಅದರಲ್ಲಿ ದಕ್ಷಿಣದ ಕೆಲ ರಾಜ್ಯ ಬಿಟ್ಟು ಉತ್ತರದ ಎಲ್ಲಾ ರಾಜ್ಯಗಳನ್ನ ಸೇರಿಸಿಕೊಂಡು ಹೊಸ ರಾಷ್ಟ್ರದ ಕಲ್ಪನೆ ಮುಂದಿಟ್ಟುಕೊಂಡಿದ್ದರು ಎಂದರು.

1908 ರಲ್ಲಿ ಸ್ವಾತಂತ್ರ ಬರೋದಕ್ಕೂ ಮುಂಚೆಯೇ ಆಘಾ ಖಾನ್ ಅವರು ರಾಷ್ಟ್ರದೊಳಗೊಂದು ರಾಷ್ಟ್ರ ಎಂದಿದ್ದರು. ಸ್ವತಂತ್ರ್ಯದ ಬಳಿಕ ರಾಷ್ಟ್ರದೊಳಗೊಂದು ರಾಷ್ಟ್ರದ ಕಲ್ಪನೆಯನ್ನು ಬಿಡುತ್ತಾರೆ ಎಂದುಕೊಂಡಿದ್ವಿ. ಆದರೇ ಇವತ್ತು ಅದೇ ಕಲ್ಪನೆಯನ್ನು ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಸಂಘಟನೆಗಳು ಬೆಳೆಸುತ್ತಿರೋ ರೀತಿ ನೋಡಿದರೆ ಆಘಾತಕಾರಿಯಾಗಿದೆ ಎಂದರು.

ಸರ್ಕಾರ ಏನು ಮಾಡಬೇಕೋ ಮಾಡುತ್ತದೆ, ಜನರೂ ಜಾಗೃತರಾಗಬೇಕು. ಜನ ಜಾಗೃತರಾಗದಿದ್ದರೇ 1947 ರಲ್ಲಿ ಪಾಕಿಸ್ತಾನ-ಭಾರತ ವಿಭಜನೆಯ ಘಟನೆಗಳು ಮತ್ತೆ ಮರುಕಳಿಸಬಹುದು. ಅದಾಗಬಾರದು ಅಂದರೇ ಜನ ಜಾಗೃತಿಯೇ ಇದಕ್ಕೆ ಇರೋ ಉತ್ತರ ಎಂದರು.

ABOUT THE AUTHOR

...view details