ಕರ್ನಾಟಕ

karnataka

ETV Bharat / state

ವಾಯು ವಿಹಾರದಲ್ಲೂ ಚುನಾವಣೆ ಬಿಸಿ: ಕ್ರೀಡಾಂಗಣದಲ್ಲಿ ಶೋಭಾ ಮತಯಾಚನೆ

ಕಳೆದ ಐದು ವರ್ಷದಿಂದ ನಾಪತ್ತೆಯಾಗಿದ್ದರು ಎಂಬ ಆರೋಪ ಹೊತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ವಾರಕ್ಕೆ ನಾಲ್ಕು ದಿನ ಕ್ಷೇತ್ರದಲ್ಲಿ ಬೀಡುಬಿಟ್ಟು, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿ- ಹಳ್ಳಿ ತಿರುಗುತ್ತಾ ಭರ್ಜರಿ ಪ್ರಚಾರ ನಡೆಸಿದರು.

By

Published : Apr 3, 2019, 7:48 AM IST

ಶೋಭಾ ಪ್ರಚಾರ

ಉಡುಪಿ: ಚಿಕ್ಕಮಗಳೂರು-ಉಡುಪಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಮೈದಾನದಲ್ಲಿ ಮತಯಾಚನೆ ನಡೆಸಿದರು.

ಕಳೆದ ಐದು ವರ್ಷದಿಂದ ನಾಪತ್ತೆಯಾಗಿದ್ದರು ಎಂಬ ಆರೋಪ ಹೊತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ವಾರಕ್ಕೆ ನಾಲ್ಕು ದಿನ ಕ್ಷೇತ್ರದಲ್ಲಿ ಬೀಡುಬಿಟ್ಟು, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿ- ಹಳ್ಳಿ ತಿರುಗುತ್ತಾ ಭರ್ಜರಿ ಪ್ರಚಾರ ನಡೆಸಿದರು.

ಶೋಭಾ ಪ್ರಚಾರ

ನಿನ್ನೆ ಮೂಡಿಗೆರೆ ತಾಲೂಕಿನಾದ್ಯಂತ ಪ್ರಚಾರ ನಡೆಸಿದ ಕರಂದ್ಲಾಜೆ, ಜಿಲ್ಲಾ ಆಟದ ಮೈದಾನದಲ್ಲಿ ವಾಯು ವಿಹಾರಕ್ಕೆ ಬಂದಿದ್ದ ಜನರ ಬಳಿ ಖುದ್ದು ತೆರಳಿ ಮತಯಾಚನೆ ನಡೆಸಿದರು. ಕ್ರೀಡಾಂಗಣದಲ್ಲಿದ್ದ ಸಾರ್ವಜನಿಕರು ಹಾಗೂ ಆಟವಾಡುತ್ತಿದ್ದ ಯುವಕರ ಬಳಿ ತೆರಳಿ ತಮ್ಮಗೇ ಮತ ಹಾಕುವಂತೆ ಮನವಿ ಮಾಡಿದರು. ಜೊತೆಗೆ ನಿಮ್ಮ ಮನೆಯವರಿಗೆ ಹಾಗೂ ಸ್ನೇಹಿತರೆಲ್ಲರಿಗೂ ಬಿಜೆಪಿ ಬೆಂಬಲಿಸುವಂತೆ ಹೇಳಿ ಎಂದು ಕೋರಿದರು.

ಕ್ರೀಡಾಂಗಣದಲ್ಲಿದ್ದ ಯುವಕರು ಜಿಲ್ಲೆಯ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸುವಂತೆ ಹೇಳಿದರು.

ABOUT THE AUTHOR

...view details