ಚಿಕ್ಕಮಗಳೂರು:ಜಿಲ್ಲಾ ಎಸ್ಪಿ ನಿವಾಸದ ಬಳಿಯೇ ಎರಡು ಪಕ್ಷಿಗಳು ಸತ್ತು ಬಿದ್ದಿದ್ದು, ಚಿಕ್ಕಮಗಳೂರು ಜಿಲ್ಲಾ ಜನರಲ್ಲಿ ಹಕ್ಕಿಜ್ವರದ ಆತಂಕ ಮನೆ ಮಾಡಿದೆ.
ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ಬಳಿ ಸತ್ತು ಬಿದ್ದಿರುವ ಹಕ್ಕಿಗಳು: ಕಾಫಿ ನಾಡಲ್ಲಿ ಹಕ್ಕಿಜ್ವರದ ಆತಂಕ - ಹಕ್ಕಿಜ್ವರ
ಚಿಕ್ಕಮಗಳೂರಿನಲ್ಲಿ ಎಸ್ಪಿ ನಿವಾಸದ ಬಳಿಯೇ ಪಕ್ಷಿಗಳು ಸತ್ತು ಬಿದ್ದಿದ್ದು, ಜನರಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ.
![ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ಬಳಿ ಸತ್ತು ಬಿದ್ದಿರುವ ಹಕ್ಕಿಗಳು: ಕಾಫಿ ನಾಡಲ್ಲಿ ಹಕ್ಕಿಜ್ವರದ ಆತಂಕ bird flu panic in chikmagalore](https://etvbharatimages.akamaized.net/etvbharat/prod-images/768-512-6477294-thumbnail-3x2-surya.jpg)
ಚಿಕ್ಕಮಗಳೂರಿನಲ್ಲಿ ಹಕ್ಕಿಜ್ವರದ ಆತಂಕ
ಚಿಕ್ಕಮಗಳೂರಿನಲ್ಲಿ ಹಕ್ಕಿಜ್ವರದ ಆತಂಕ
ಎರಡು ಮೈನಾ ಹಕ್ಕಿಗಳು ನಿತ್ರಾಣಗೊಂಡು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಅವುಗಳ ಕಳೇಬರವನ್ನು ಲ್ಯಾಬ್ಗೆ ಕಳುಹಿಸಿ, ವರದಿ ತರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸ್ಪಿ ಮನೆಯ ಬಳಿಯೇ ಈ ಘಟನೆ ನಡೆದಿದೆ. ಹೀಗಾಗಿ ಕೊರೊನಾ,ಮಂಗನಕಾಯಿಲೆ ಜೊತೆಗೆ ಹಕ್ಕಿ ಜ್ವರದ ಆತಂಕ ಕೂಡ ಎದುರಾಗಿದೆ.
ಸ್ಥಳಕ್ಕೆ ಜಿಲ್ಲಾ ವಿಚಕ್ಷಣಾ ವೈದ್ಯಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.