ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಕಾರ್ಮಿಕರನ್ನ ಕೂಡಿ ಹಾಕಿ ಹಲ್ಲೆ ನಡೆಸಿರುವ ಆರೋಪ - ಕಾರ್ಮಿಕರನ್ನ ಕೂಡಿ ಹಾಕಿ ಹಲ್ಲೆ ನಡೆಸಿದ ಮಾಲೀಕ

ಕೊಟ್ಟ ಹಣ ವಾಪಸ್​ ನೀಡದ ಹಿನ್ನೆಲೆ ತೋಟದ ಮಾಲೀಕ, ಕಾರ್ಮಿಕರನ್ನ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

Kn_ckm_01
ಕೊಠಡಿಯಲ್ಲಿ ಕಾರ್ಮಿಕರನ್ನ ಕೂಡಿ ಹಾಕಿರುವ ಮಾಲೀಕ

By

Published : Oct 11, 2022, 5:10 PM IST

Updated : Oct 11, 2022, 5:26 PM IST

ಚಿಕ್ಕಮಗಳೂರು: 9 ಲಕ್ಷ ಮುಂಗಡ ನೀಡಿದ್ದ ಹಣ ವಾಪಸ್​​ ಕೊಡದ ಹಿನ್ನಲೆ ತೋಟದ ಮಾಲೀಕ, ಕಾರ್ಮಿಕರನ್ನ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಎನ್​​.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಜೇನುಗದ್ದೆಯ ಪುರದಲ್ಲಿ ನಡೆದಿದೆ.

ಕಾಫಿ ತೋಟದ ಕೆಲಸಕ್ಕೆ ಸೇರುವಾಗ ಕಾರ್ಮಿಕರಿಗೆ ಮುಂಗಡವಾಗಿ ಮಾಲೀಕ 9 ಲಕ್ಷ ​​ಹಣ ನೀಡಿದ್ದ. ಕಾರ್ಮಿಕರು ಬೇರೆಡೆ ಕೆಲಸಕ್ಕೆ ಹೋಗುತ್ತೇವೆ ಎಂದಾಗ ತೋಟದ ಮಾಲೀಕ ಹಣ ವಾಪಸ್ ಕೇಳಿದ್ದಾನೆ. ಸಮಯ ನೀಡಿ ಹಣ ಕಟ್ಟಿ ಹೋಗುತ್ತೇವೆ ಎಂದರೂ ಕಾರ್ಮಿಕರ ಮೇಲೆ ಮಾಲೀಕ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಘಟನೆಯ ವಿಡಿಯೋ ಮಾಡಿದ್ದಕ್ಕೆ ಗರ್ಭಿಣಿ ಮೇಲೂ ಹಲ್ಲೆ ಮಾಡಿರುವುದಾಗಿ ಹೇಳಲಾಗಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ವಿಚಾರವಾಗಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದರೂ ನ್ಯಾಯ ಸಿಗುತ್ತಿಲ್ಲ ಎಂದು ಕಾರ್ಮಿಕ ಕುಟುಂಬಗಳು ಹೇಳುತ್ತಿವೆ. ಒಟ್ಟು 6 ಕಾರ್ಮಿಕ ಕುಟುಂಬದಿಂದ ಈ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:ತಾಯಿಯಿಲ್ಲದ 10 ತಿಂಗಳ ಮಗು ತಂದೆಗೆ ಹಸ್ತಾಂತರಿಸಲು ಹೈಕೋರ್ಟ್ ನಕಾರ.. ಏನಿದು ಪ್ರಕರಣ?

Last Updated : Oct 11, 2022, 5:26 PM IST

ABOUT THE AUTHOR

...view details