ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು : ಅಸ್ಸೋಂ ಕೂಲಿ ಕಾರ್ಮಿಕರಿಂದ ತೋಟದ ಮಾಲೀಕನ ಮೇಲೆ ಹಲ್ಲೆಗೆ ಯತ್ನ ಆರೋಪ

ಅಸ್ಸೋಂ ವಲಸಿಗರಿಂದ ಚಿಕ್ಕಮಗಳೂರುನಲ್ಲಿ ಕಾಫಿ ತೋಟದ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.

By

Published : Dec 18, 2022, 7:37 PM IST

Updated : Dec 18, 2022, 8:49 PM IST

Assam workers
ಅಸ್ಸಾಂ ಕಾರ್ಮಿಕರು

ಕಾಫಿತೋಟ ಮಾಲೀಕ ಅಜ್ಗರ್ ಬಣಕಲ್

ಚಿಕ್ಕಮಗಳೂರು :ಅಸ್ಸೋಂ ಕಾರ್ಮಿಕರು ಕಾಫಿತೋಟದ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪ ಪ್ರಕರಣ ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹ್ಯಾರೀಸ್ ಎಸ್ಟೇಟ್‍ನಲ್ಲಿ ಘಟನೆ ನಡೆದಿದೆ.

ಅಡ್ವಾನ್ಸ್ ಹಣ ಪಡೆದು ಯಾಕೆ ಕೆಲಸ ಮಾಡಿಲ್ಲ ಎಂದು ಪ್ರಶ್ನಿಸಿದ್ದ ತೋಟದ ಮಾಲೀಕ ಅಜ್ಗರ್ ಬಣಕಲ್ ಮೇಲೆ ಮಚ್ಚು, ದೊಣ್ಣೆಗಳಿಂದ ಕಾರ್ಮಿಕರು ಹಲ್ಲೆಗೆ ಯತ್ನಿಸಿದ್ದಾರಂತೆ.

ಅಸ್ಸೋಂ ದಾಖಲೆಗಳ ಜೊತೆ ಕೆಲಸಕ್ಕೆ ಬಂದಿರೋ ಇವರು ಅಕ್ರಮ ಬಾಂಗ್ಲಾ ನಿವಾಸಿಗಳು ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿಂದೆಯೂ ಅಸ್ಸಾಮಿಗರ ಸೋಗಿನಲ್ಲಿ ಸಾವಿರಾರು ಅಕ್ರಮ ಬಾಂಗ್ಲಾ ನಿವಾಸಿಗಳು ಇದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಬಣಕಲ್ ಠಾಣೆಯಲ್ಲಿ ತೋಟದ ಮಾಲೀಕ ಅಜ್ಗರ್ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ :ಬೆಂಗಳೂರಲ್ಲಿ ಮೀನು ವ್ಯಾಪಾರಿ ಮೇಲೆ ಲಾಂಗ್​ ಬೀಸಲು ಯತ್ನ: ಸಿಸಿಟಿವಿ ದೃಶ್ಯ

Last Updated : Dec 18, 2022, 8:49 PM IST

ABOUT THE AUTHOR

...view details