ಕರ್ನಾಟಕ

karnataka

ETV Bharat / state

ಪ್ಲೀಸ್​ ಖಾಕಿ ಬಿಚ್ಚಿಡಬೇಡಿ... ಮತ್ತೆ ಖಾಕಿ ತೊಟ್ಟು ಮಿಂಚಿ: ಇದು ಅಣ್ಣಾಮಲೈ ಅಭಿಮಾನಿಗಳ ಕೋರಿಕೆ - R_Kn_Ckm_02_28_Dcp Annamali_Rajkumar_Ckm_pkg_7202347

ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ ಅಣ್ಣಾಮಲೈ ನಡೆ ಚಿಕ್ಕಮಗಳೂರು ಜನತೆಯಲ್ಲಿ ಭಾರೀ ಬೇಸರವನ್ನುಂಟು ಮಾಡಿದೆ. ಅವರು ಮತ್ತೆ ಪೊಲೀಸ್ ಸೇವೆಯಲ್ಲೇ ಮುಂದುವರಿಯಬೇಕೆಂದು ಅಭಿಮಾನಿಗಳು ಆಶಯವಾಗಿದೆ.

ಮತ್ತೆ ಖಾಕಿ ತೊಡುವಂತೆ ಅಣ್ಣಾಮಲೈಗೆ ಅಭಿಮಾನಿಗಳ ಮನವಿ

By

Published : May 28, 2019, 5:20 PM IST

Updated : May 28, 2019, 5:34 PM IST

ಚಿಕ್ಕಮಗಳೂರು: ಸೂಪರ್ ಕಾಪ್, ಜನ ಮೆಚ್ಚಿದ ಅಧಿಕಾರಿ ಎಂದೇ ಜನ ಮೆಚ್ಚುಗೆ ಗಳಿಸಿದ್ದಅಣ್ಣಾಮಲೈ, ಜನ ಸ್ನೇಹಿ ಪೊಲೀಸ್ ಅಧಿಕಾರಿಗಳಲ್ಲಿ ಪ್ರಮುಖರು. ಹೀಗಾಗಿ ಜಿಲ್ಲೆಯ ಜನತೆ ಅಣ್ಣಾಮಲೈ, ಪೊಲೀಸ್ ಅಧಿಕಾರಿಯಾಗೇ ಮುಂದುವರಿಯಬೇಕೆಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಮತ್ತೆ ಖಾಕಿ ತೊಡುವಂತೆ ಅಣ್ಣಾಮಲೈಗೆ ಅಭಿಮಾನಿಗಳ ಮನವಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಣ್ಣಾಮಲೈ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಅಷ್ಟರ ಮಟ್ಟಿಗೆ ತಮ್ಮ ದಕ್ಷತೆ, ಪ್ರಾಮಾಣಿಕತೆಯಿಂದ ಪ್ರತಿಯೊಬ್ಬರಿಗೂ ಚಿರಪರಿಚಿತ ಪೊಲೀಸ್ ಅಧಿಕಾರಿ. ಚಿಕ್ಕಮಗಳೂರು ಎಸ್ಪಿಯಾಗಿ ಕೆಲಸ ಮಾಡಿರುವ ಇವರು, ತಮ್ಮ ಕಾರ್ಯ ವೈಖರಿಯಿಂದಲೇ ಜಿಲ್ಲೆಯಲ್ಲಿ ಮನೆ ಮಾತಾಗಿದ್ದರು. ಪೊಲೀಸ್ ಸಿಬ್ಬಂದಿಗೂ ಅಚ್ಚು ಮೆಚ್ಚಿನ ಅಧಿಕಾರಿಯಾಗಿದ್ರು. ಪೊಲೀಸ್ ಇಲಾಖೆಯಲ್ಲಿಯೇ ಬೇರು ಮಟ್ಟದಿಂದ ಸರ್ಜರಿ ಮಾಡಿದ ಅಧಿಕಾರಿ ಇವರು.

ಕಳ್ಳಕಾಕರಿಗೆ ಸಿಂಹಸ್ವಪ್ನರಾಗಿದ್ದ ಇವರು, ಜತೆ ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ಎತ್ತಿದ ಕೈ. ಹತ್ತಾರೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾಗಿದ್ದರು. ಸಾಕಷ್ಟು ಕುಟುಂಬ ಕಲಹ ಪ್ರಕರಣಗಳನ್ನ ಸರಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಏಕೆ ತೂಕ ಇಳಿಸಿಕೊಂಡು ಬಂದ ಪೊಲೀಸ್ ಸಿಬ್ಬಂದಿಗೆ ನೀವು ಕೇಳಿದ ಜಾಗಕ್ಕೆ ವರ್ಗಾವಣೆ ಎಂಬ ಹೊಸ ನಿಯಮ ಜಾರಿ ತಂದು ಅನುಷ್ಠಾನ ಗೊಳಿಸಿದ್ದು ಇಲಾಖೆಯಲ್ಲಿ ಭಾರೀ ಸುದ್ದಿ ಮಾಡಿತ್ತು.

ಇನ್ನು ಮರಗಳ ದಂಧೆ ಕೋರರಿಗೆ ಕಡಿವಾಣ ಹಾಕಿದ್ದಲ್ಲದೇ, ಜಿಲ್ಲೆಯಲ್ಲಿ ದತ್ತಾಪೀಠ ಉತ್ಸವ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಂಡಿದ್ದು ಇವರ ದಕ್ಷತೆಗೆ ಹಿಡಿದ ಕೈಗನ್ನಡಿ. ಇದೀಗ ಅವರ ಸ್ಥಾನಕ್ಕೆ ರಾಜೀನಾಮೇ ನೀಡಿರುವ ವಿಚಾರ ತಿಳಿದು ಚಿಕ್ಕಮಗಳೂರಿನಲ್ಲಿರುವ ಅವರ ಅಭಿಮಾನಿಗಳು ದಿಕ್ಕು ತೋಚದಾಗಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ಕೆಲಸಕ್ಕೆ ರಾಜೀನಾಮೆ ನೀಡಬಾರದು. ಅವರ ಅವಶ್ಯಕತೆ ಪೊಲೀಸ್ ಇಲಾಖೆಗೆ ತುಂಬಾ ಇದೆ. ಅವರು ಅದೇ ಸ್ಥಾನದಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡುತ್ತಿದ್ದಾರೆ.

Last Updated : May 28, 2019, 5:34 PM IST

For All Latest Updates

TAGGED:

ABOUT THE AUTHOR

...view details