ಚಿಕ್ಕಮಗಳೂರು: ಕೆಲಸಕ್ಕೆ ಹೋಗು ಎಂದು ಬುದ್ಧಿ ಮಾತು ಹೇಳಿದ್ದಕ್ಕೆ ಪಾಪಿ ಮಗನೋರ್ವ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ಸಂಭವಿಸಿದೆ.
ಕೆಲಸಕ್ಕೆ ಹೋಗು ಎಂದಿದ್ದಕ್ಕೆ ತಾಯಿಯನ್ನೇ ಕೊಂದ ಪಾಪಿ ಮಗ!
ದೊಣ್ಣೆಯಿಂದ ತಾಯಿಗೆ ಬಲವಾಗಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮಹಿಳೆ ಅಸುನೀಗಿದ್ದಾಳೆ.
ಕೊಲೆಯಾದ ಮಹಿಳೆ ಸಾಕಮ್ಮ
ಸಾಕಮ್ಮ (55) ಮೃತ ಮಹಿಳೆ. ನಂದೀಶ್ (35) ತಾಯಿಯನ್ನ ಕೊಂದಿರುವ ಪಾಪಿ ಮಗ. ಜಿಲ್ಲೆಯ ಶೃಂಗೇರಿ ತಾಲೂಕಿನ ಹೋಕಳಿ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ದೊಣ್ಣೆಯಿಂದ ತಾಯಿಗೆ ಬಲವಾಗಿ ಹೊಡೆದು ಮಗ ಈ ಕೃತ್ಯ ಎಸಗಿದ್ದಾನೆ.
ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆರೋಪಿ ನಂದೀಶ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.