ಕರ್ನಾಟಕ

karnataka

ನರ್ಸ್ ವೇಷದಲ್ಲಿ ಬಂದು ಮಹಿಳೆಯಿಂದ ಮಗು ಅಪಹರಿಸಿ ಪರಾರಿ

ನರ್ಸ್ ವೇಷದಲ್ಲಿ ಬಂದು ಮಹಿಳೆಯೊಬ್ಬಳು ಮಗುವನ್ನು ಅಪಹರಿಸಿರುವ ಪ್ರಕರಣ ಚಿಕ್ಕಮಗಳೂರು ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ.

By

Published : Jan 5, 2020, 12:11 PM IST

Published : Jan 5, 2020, 12:11 PM IST

hospital
ಮಗು ಕಿಡ್ನ್ಯಾಪ್

ಚಿಕ್ಕಮಗಳೂರು: ನಗರದಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶುಶ್ರೂಷಕಿಯ ವೇಷದಲ್ಲಿ ಬಂದ ಖತರ್ನಾಕ್ ಮಹಿಳೆಯೊಬ್ಬಳು ನಾಲ್ಕು ದಿನದ ಗಂಡು ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾಳೆ.

ಮಗು ಅಪಹರಣ

ತಾನು ನರ್ಸ್‌ ಎಂದು ಹೇಳಿದ ಅಪರಿಚಿತ ಮಹಿಳೆ 4 ದಿನದ ಗಂಡು ಮಗುವನ್ನು ಎತ್ತಿಕೊಂಡು ಹೋಗಿದ್ದಾಳೆ. ಚಿಕ್ಕಮಗಳೂರು ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಸ್ಸೋಂ ಮೂಲದ ಅಂಜಲಿ-ಸುನಿಲ್ ದಂಪತಿಗೆ ಹೊಸ ವರ್ಷದಂದು ದಂಪತಿಗೆ ಮಗು ಜನಿಸಿತ್ತು.

ಆಸ್ಪತ್ರೆಯಲ್ಲಿರುವ ಎಲ್ಲಾ ಸಿಸಿಟಿವಿಗಳು ಕೆಟ್ಟು ಹೋಗಿದ್ದು ಆಸ್ಪತ್ರೆಯ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಹಾಗಾಗಿ ಈ ಪ್ರಕರಣವನ್ನು ಬೇಧಿಸುವುದು ಪೊಲೀಸರಿಗೂ ಸವಾಲಾಗುವ ಸಾಧ್ಯತೆ ಇದೆ.

ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

For All Latest Updates

ABOUT THE AUTHOR

...view details