ಕರ್ನಾಟಕ

karnataka

ETV Bharat / state

ಕಾಫಿನಾಡಿನಲ್ಲಿ ಕಠಿಣ ಲಾಕ್​ಡೌನ್​: 4 ದಿನ ಚಿಕ್ಕಮಗಳೂರು ಸಂಪೂರ್ಣ ಸ್ತಬ್ಧ - ಚಿಕ್ಕಮಗಳೂರಲ್ಲಿ ಕಠಿಣ ಲಾಕ್​ಡೌನ್​

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಜಿಲ್ಲಾಡಳಿತ ಸದ್ಯ ನಾಲ್ಕು ದಿನ ಕಠಿಣ ಲಾಕ್​ಡೌನ್​ ಜಾರಿಗೊಳಿಸಲು ಮುಂದಾಗಿದೆ.

dc
dc

By

Published : May 19, 2021, 8:03 PM IST

Updated : May 19, 2021, 10:37 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ಕೇಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಠಿಣ ಲಾಕ್​ಡೌನ್​ಗೆ ಜಿಲ್ಲಾಡಳಿತ ಮುಂದಾಗಿದೆ.

ನಾಲ್ಕು ದಿನಗಳ ಕಾಲ ಕಾಫಿನಾಡು ಸಂಪೂರ್ಣ ಸ್ತಬ್ಧವಾಗಲಿದ್ದು, ನಾಳೆ ಬೆಳಗ್ಗೆ 10 ಗಂಟೆಯಿಂದ ಮೇ 24 ರ ಬೆಳಗ್ಗೆ 6ರವರೆಗೆ ಸಂಪೂರ್ಣ ಲಾಕ್​ಡೌನ್​ ಆಗಲಿದೆ ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಹೇಳಿದ್ದಾರೆ.

ಅಂಗಡಿ-ಮುಂಗಟ್ಟುಗಳೆಲ್ಲಾ ಕ್ಲೋಸ್ ಆಗಲಿದ್ದು, ಹಾಲು, ಮೆಡಿಕಲ್ ಶಾಪ್​ಗಳು ಓಪನ್ ಇರುತ್ತವೆ. ಜನರು ನಡೆದುಕೊಂಡೇ ಅಗತ್ಯ ವಸ್ತುಗಳ ಖರೀದಿಗೆ ಬರಬೇಕು. ವಾಹನಗಳಿಗೆ ಅನುಮತಿ ಇಲ್ಲ. 24 ರವರೆಗೆ ಸುಮಾರು 200 ಮದುವೆಗೆ ಅನುಮತಿ ಪಡೆದಿದ್ದಾರೆ. ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇವಲ 10 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಕಾಫಿನಾಡಿನಲ್ಲಿ ಕಠಿಣ ಲಾಕ್​ಡೌನ್​: 4 ದಿನ ಚಿಕ್ಕಮಗಳೂರು ಸಂಪೂರ್ಣ ಸ್ತಬ್ಧ

ಅಂತ್ಯ ಸಂಸ್ಕಾರಕ್ಕೆ ಸರ್ಕಾರದ ನಿರ್ಧಾರದಂತೆ 5 ಜನ‌ರಿಗಷ್ಟೇ ಅವಕಾಶ ನೀಡಲಾಗಿದ್ದು, ಹೊರ ಜಿಲ್ಲೆ, ರಾಜ್ಯದವರು ಚೆಕ್​ಪೋಸ್ಟ್​ನಲ್ಲಿ ಸಂಪೂರ್ಣ ಮಾಹಿತಿ ನೀಡಬೇಕು. ಹೊರಗಿನಿಂದ ಬಂದವರು ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಆಗಬೇಕು. ಆಸ್ಪತ್ರೆಗೆ ಹೋಗುವವರು ದಾಖಲೆ ತೋರಿಸಬೇಕು ಎಂದು ಜಿಲ್ಲಾಧಿಕಾರಿ ಕೆ ಎನ್​ ರಮೇಶ್ ಆದೇಶ ಹೊರಡಿಸಿದ್ದಾರೆ.

Last Updated : May 19, 2021, 10:37 PM IST

ABOUT THE AUTHOR

...view details