ಕರ್ನಾಟಕ

karnataka

By

Published : Jan 10, 2020, 1:25 PM IST

ETV Bharat / state

ಶೃಂಗೇರಿಯಲ್ಲಿ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ: ಕಿಮ್ಮನೆ ರತ್ನಾಕರ್​​​ ಭಾಗಿ

ಶೃಂಗೇರಿಯಲ್ಲಿ ನಡೆಯುತ್ತಿರುವ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ  ಮಾಜಿ ಸಚಿವ ಕಿಮ್ಮನೆ ರತ್ನಾಕರ್​​​ ಭಾಗಿಯಾಗಿದ್ದರು.

ಶೃಂಗೇರಿಯಲ್ಲಿ 16 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ, 16th District Literary Conference in Sringeri
ಶೃಂಗೇರಿಯಲ್ಲಿ 16 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು:ಶೃಂಗೇರಿಯಲ್ಲಿ ನಡೆಯುತ್ತಿರುವ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್​​​ ಭಾಗಿಯಾಗಿದ್ದರು.

ಶೃಂಗೇರಿಯಲ್ಲಿ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮ ಖಾಸಗಿ ಕಾಂಪೌಂಡಿನ ಆವರಣದ ಒಳಗಡೆ ನಡೆಯುತ್ತಿದೆ. ಕಾರ್ಯಕ್ರಮ ಅತ್ಯಂತ ಶಾಂತಿಯುತವಾಗಿ ನಡೆಯಲು ನಾವು ಬದ್ಧರಾಗಿರಬೇಕು. ಎಲ್ಲೋ ಒಂದು ಕಡೆ ಹೊರ ಪ್ರಪಂಚ ನಮ್ಮ ಮೇಲೆ ದಾಳಿ ಮಾಡುತ್ತಿದ್ದು, ಶಾಂತಿ, ಸಂಯಮ, ತಾಳ್ಮೆಯಿಂದ ನಡೆದುಕೊಂಡು ಹೋದವರು ಈ ಪ್ರಪಂಚದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ನಮಗೆ ಎಷ್ಟೇ ನೋವಿದ್ದರೂ ಕೂಡ ಈ ಕಾಂಪೌಂಡಿನ ಒಳಗಡೆ ನಡೆಯುವ ಎರಡು ದಿನದ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸೋಣ ಎಂದರು.

ಯಾರಿಗೆ ಎಷ್ಟೇ ಸಿಟ್ಟಿದ್ದರೂ ಕೂಡ ಸಂಯಮದಿಂದ ಈ ಸಾಹಿತ್ಯ ಸಮ್ಮೇಳನ ಮುಗಿಸೋಣ. ಸಾಹಿತ್ಯಾಸಕ್ತರು ತೋರಿಸಿರವ ದಾರಿಯ ಮೂಲಕ ಎರಡು ದಿನದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ, ಯಾವುದೇ ಗೊಂದಲವಿಲ್ಲದೆ ನಡೆಯಲಿ. ಈ ಮೂಲಕ ಜಗತ್ತಿಗೆ ಹಾಗೂ ನಾಡಿಗೆ ಒಳ್ಳೆಯ ಸಂದೇಶ ನೀಡೋಣ ಎಂದು ಯುವಕರಿಗೆ ನಾನು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಹೇಳಿದರು.

For All Latest Updates

TAGGED:

ABOUT THE AUTHOR

...view details