ಚಿಕ್ಕಮಗಳೂರು: ನಿರಂತರ ಮಳೆ ಇರುವುದರಿಂದ ಎಲೆಚುಕ್ಕಿ ರೋಗ ಹರಡುತ್ತಿದೆ. ಫಂಗಸ್ ತಡೆಯಲು ಔಷಧಿ ಸಿಂಪಡಿಸುವ ಕೆಲಸವಾಗುತ್ತಿದೆ. ರೋಗ ನಿಯಂತ್ರಣಕ್ಕೆ 10 ಕೋಟಿ ರೂ.ಬಿಡುಗಡೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿಕ್ಕಮಗಳೂರಿನ ಕೊಪ್ಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಯೂನಿವರ್ಸಿಟಿ ತಂಡ ಕಳುಹಿಸಿ ಅಧ್ಯಯನ ಮಾಡುತ್ತಿದೆ. ವಿಜ್ಞಾನಿಗಳು ಯಾವ ಔಷಧಿ ಹೇಳುತ್ತಾರೋ ಅದನ್ನು ಕೂಡಲೇ ಸಿಂಪಡಿಸಲಾಗುವುದು ಎಂದರು.