ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ದಿನೇ ದಿನೆ ಕಳ್ಳರ ತಂಡ ಮದ್ಯಕ್ಕಾಗಿ ವೈನ್ಶಾಪ್ನ್ಲ್ಲಿ ಕಳ್ಳತನ ಮಾಡುತ್ತಿದ್ದು, 1 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯವನ್ನು ದೋಚಿದ್ದಾರೆ.
ಎಣ್ಣೆ ಸಿಗದಿದ್ದಕ್ಕೆ ವೈನ್ ಶಾಪ್ಗೆ ಕನ್ನ: 1 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ಕಳವು - Mirror to Chikkaballapur Wine Shop
ಲಾಕ್ಡೌನ್ ಹಿನ್ನಲೆ ಕುಡಿಯಲು ಮದ್ಯ ಸಿಗದ ಕಾರಣ ಚಿಕ್ಕಬಳಪುರದಲ್ಲಿರುವ ಸಪ್ತಗಿರಿ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಖದೀಮರು 1 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯವನ್ನು ದೋಚಿದ್ದಾರೆ.

ಮದ್ಯ ದೋಚಿದ ಖದೀಮರು
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವೈ ಹುಣಸೇನಹಳ್ಳಿ ರಸ್ತೆಯಲ್ಲಿ ಇರುವ ಸಪ್ತಗಿರಿ ಬಾರ್ ಅಂಡ್ ರೆಸ್ಟೋರೆಂಟ್ನ ಚಾವಣಿ ಶೀಟ್ಗಳನ್ನು ತೆಗೆದು ಮದ್ಯ ಕಳವು ಮಾಡಲಾಗಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯವನ್ನು ದೋಚಿದ್ದು, ಅಂಗಡಿಯೊಳಗಿನ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅನ್ನೂ ಕದ್ದೊಯ್ದಿದ್ದಾರೆ.
ಇನ್ನು ಈ ಪ್ರಕರಣ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.