ಕರ್ನಾಟಕ

karnataka

ETV Bharat / state

ನೂತನ ಕೆರೆ ನಿರ್ಮಾಣ : ಎಸ್. ಎನ್. ಸುಬ್ಬಾರೆಡ್ಡಿ ಭೇಟಿ, ಪರಿಶೀಲನೆ... - ಗುಡಿಬಂಡೆ ತಾಲೂಕು ಸೋಮಲಾಪುರ ಹತ್ತಿರ ನೂತನವಾಗಿ ನಿರ್ಮಾಣವಾಗುತ್ತಿರುವ ಕೆರೆ

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಸೋಮಲಾಪುರ ಹತ್ತಿರ ನೂತನವಾಗಿ ನಿರ್ಮಾಣವಾಗುತ್ತಿರುವ ಕೆರೆಯ ಕಾಮಗಾರಿಯನ್ನು ಇಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿಯವರು ಪರಿಶೀಲನೆ ನಡೆಸಿದರು.

S. N. Subba reddy visits to chikkaballapura
ನೂತನ ಕೆರೆ ನಿರ್ಮಾಣ : ಎಸ್. ಎನ್. ಸುಬ್ಬಾರೆಡ್ಡಿ ಭೇಟಿ, ಪರಿಶೀಲನೆ...

By

Published : Dec 15, 2019, 4:35 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕು ಸೋಮಲಾಪುರ ಹತ್ತಿರ ನೂತನವಾಗಿ ನಿರ್ಮಾಣವಾಗುತ್ತಿರುವ ಕೆರೆಯ ಕಾಮಗಾರಿಯನ್ನು ಇಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿಯವರು ಪರಿಶೀಲನೆ ನಡೆಸಿದ್ದಾರೆ.

ನೂತನ ಕೆರೆ ನಿರ್ಮಾಣ : ಎಸ್. ಎನ್. ಸುಬ್ಬಾರೆಡ್ಡಿ ಭೇಟಿ, ಪರಿಶೀಲನೆ...

ಉಲ್ಲೋಡು ಪಂಚಾಯಿತಿ ಸುತ್ತಮುತ್ತಲ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ 2018-19ನೇ ಸಾಲಿನಲ್ಲಿ ಸುಮಾರು 2.50 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನದಡಿ ಗುಡಿಬಂಡೆ ತಾಲೂಕು ಸೋಮಲಾಪುರದ ಸುಬ್ಬರಾಯನ ಕೆರೆಯನ್ನು ನಿರ್ಮಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದು ಎಸ್. ಎನ್. ಸುಬ್ಬಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದು, ಗುಣಮಟ್ಟದ ಸಾಮಗ್ರಿಗಳನ್ನು ಹಾಕಿ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಶಾಸಕರು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details