ಕರ್ನಾಟಕ

karnataka

ETV Bharat / state

50 ಸಾವಿರ ಲಂಚಕ್ಕೆ ಬೇಡಿಕೆ:ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸಿಬಿ ಬಲೆಗೆ - ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಏನೂ ತಿಳಿಯದ ಅಮಾಯಕ ಮಂದಿ ಭ್ರಷ್ಟ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಾರೆ. ಇ- ಖಾತೆ ಮಾಡಿಕೊಡಲು ಪ.ಪಂ. ಮುಖ್ಯಾಧಿಕಾರಿ ನಾಗರಾಜು ಸುಮಾರು 50 ಸಾವಿರ ರೂಪಾಯಿಗಳಿಗೆ ಬೇಡಿಕೆಯಿಟ್ಟದ್ದರು. ವಿಷಯ ತಿಳಿದ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಮುಖ್ಯಾಧಿಕಾರಿ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಕೈಗೊಂಡಿದ್ದಾರೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

By

Published : May 24, 2019, 10:16 PM IST

ಚಿಕ್ಕಬಳ್ಳಾಪುರ: ಇ-ಖಾತೆ ಮಾಡಿಕೊಡಲು 50 ಸಾವಿರ ಹಣಕ್ಕೆ ಬೇಡಿಕೆಯಿಟ್ಟ ಸ್ಥಳೀಯ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ 5ನೇ ವಾರ್ಡ್‌ ನಿವಾಸಿ ಬಾಲಾಜಿ ಎಂಬ ವ್ಯಕ್ತಿಯು ತಮಗೆ ಸೇರಿದ 8 ನಿವೇಶನಗಳಿಗೆ ಸಂಬಂಧಿಸಿದ ಇ- ಖಾತೆಗಳನ್ನು ಮಾಡಿಕೊಡಲು ಅರ್ಜಿ ಹಾಕಿದ್ದರು. ಆದರೆ ಇ- ಖಾತೆ ಮಾಡಿಕೊಡಲು ಪ.ಪಂ.ಮುಖ್ಯಾಧಿಕಾರಿ ನಾಗರಾಜು ಸುಮಾರು 50 ಸಾವಿರ ರೂಪಾಯಿಗಳಿಗೆ ಬೇಡಿಕೆಯಿಟ್ಟಿದ್ದಾರೆ. ಈ ಕುರಿತು ಬಾಲಾಜಿ ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ. ಅವರು ನೀಡಿದ ಮಾಹಿತಿ ಆಧರಿಸಿ ಮುಖ್ಯಾಧಿಕಾರಿ ನಾಗರಾಜ್‍ಗೆ 25 ಸಾವಿರ ಹಣ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಬಿ ಡಿವೈಎಸ್‍ಪಿ ವೆಂಕಟೇಶ್‍ನಾಯ್ಡು, ಸಬ್‍ಇನ್ಸ್​ಪೆಕ್ಟರ್​ಗಳಾದ ಶಿವಮಲ್ಲವಯ್ಯ, ಲಕ್ಷ್ಮೀದೇವಿ ಈ ಕಾರ್ಯಾಚರಣೆ ನಡೆಸಿದ್ದು ಭ್ರಷ್ಟ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧ್ಯವರ್ತಿಗಳ ಹಾವಳಿ:

ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಏನು ತಿಳಿಯದ ಅಮಾಯಕರು ಭ್ರಷ್ಟ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಾರೆ. ಸರ್ಕಾರಿ ಕೆಲಸ ಮಾಡಿಕೊಡಲು ಹಣ ಪೀಕುತ್ತಿದ್ದಾರೆ. ಆದರೆ ಈ ಬಗ್ಗೆ ದೂರು ನೀಡದೇ ಇರುವುದರಿಂದ ಮಧ್ಯವರ್ತಿಗಳ ಆಟ ಮುಂದುವರೆಯುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details