ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಗಂಧದೋತ್ಸವ - gandadotsav

ಚಿಕ್ಕಬಳ್ಳಾಪುರದ  ಟಿಪ್ಪುನಗರದಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ, ಹಜರತ್ ಗೌಸೆ ಪಾಕ್ ನಷಾನ್​ನ ಗಂಧೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

ಮಳೆಗಾಗಿ ಪ್ರಾರ್ಥನೆ: ಚಿಕ್ಕಬಳ್ಳಾಪುರದಲ್ಲಿ ಗಂಧದೋತ್ಸವ ಕಾರ್ಯಕ್ರಮ

By

Published : Sep 16, 2019, 5:09 AM IST

ಚಿಕ್ಕಬಳ್ಳಾಪುರ: ಇಲ್ಲಿನ ಟಿಪ್ಪುನಗರದಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ, ಹಜರತ್ ಗೌಸೆ ಪಾಕ್ ನಷಾನ್​ನ ಗಂಧೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ನಗರದ ಹಜರತ್ ಮುಸ್ತಫಾ ಷಾ ಖಾದರಿ ಮತ್ತು ಹಜರತ್ ಬಿ .ಬಿ. ಫಾತಿಮಾರವರ ದರ್ಗಾದಿಂದ ಮೆರವಣಿಗೆ ಮೂಲಕ ಹಜರತ್ ಗೌಸೆ ಪಾಕ್ ನಶಾನ ಬಳಿ ಬಂದು ಗಂಧೋತ್ಸವ ಫಾತೆಹಾ ಸಲ್ಲಿಸಲಾಯಿತು. ಫಕೀರರ ಗುರುಗಳಾದ ರೆಹಮಾನ್ ಉಲ್ಲಾ ಶಾ ಅಲಂ ಬರ್ದಾರ್ ರಫಾಯಿ, ಮೂಹಿಯುದ್ದಿನ್ ಶಾ ರಫಾಯಿ, ಮಹಬೂಬ್ ಉಲ್ಲಾ ಶಾ ರಫಾಯಿ ಫಾತೆಹಾ ಕಾರ್ಯಕ್ರಮ ನಡೆಸಿಕೊಟ್ಟು ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿದರು.

ಮಳೆಗಾಗಿ ಪ್ರಾರ್ಥನೆ: ಚಿಕ್ಕಬಳ್ಳಾಪುರದಲ್ಲಿ ಗಂಧದೋತ್ಸವ

ಕಾರ್ಯಕ್ರಮದಲ್ಲಿ ಬಾಸಿತ್ ಶಾ ಖಾದರಿ, ಮುಷ್ಠಾಖ್ ಶಾ ಖಾದರಿ, ಸೈಯದ್ ಅಲಿ ಶಾ ಖಾದರಿ, ಸೈಯದ್ ಶಬ್ಬೀರ್ ಖಾದರಿ, ಟೈಲರ್ ಸೈಯದ್ ಪಾಷ, ಅಮ್ಜದ್ ಬೇಗ್ ರಿಜ್ವಾನ್ ಪಾಷ, ಸೇರಿದಂತೆ ಹಲವಾರು ಭಕ್ತರು ಉಪಸ್ಥಿತರಿದ್ದರು.

ABOUT THE AUTHOR

...view details