ಕರ್ನಾಟಕ

karnataka

ETV Bharat / state

ಸೌಹಾರ್ದತೆಯಿಂದ ರಂಜಾನ್ ಹಬ್ಬ ಆಚರಿಸುವಂತೆ ಪೊಲೀಸರಿಂದ ಶಾಂತಿ ಸಭೆ

ರಂಜಾನ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಲು ಶಾಂತಿ ಸಭೆ ನಡೆಸಿದ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್. ಈದ್ಗಾ ಮೈದಾನದ ಬಳಿ ವಾಹನಗಳಿಂದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಮುಸ್ಲಿಂ ಬಾಂಧವರು ಪೊಲೀಸರು ಮನವಿ ಮಾಡಿದರು.

By

Published : Jun 4, 2019, 4:14 AM IST

ಶಾಂತಿ ಸಭೆ

ಚಿಂತಾಮಣಿ:ನಗರ ಠಾಣೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಶಾಂತಿ ಸಭೆಯಲ್ಲಿ ಎಲ್ಲ ಮಸೀದಿಯ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳು, ಮುಸ್ಲಿಂ ಮುಖಂಡರುಗಳು ಭಾಗವಹಿಸಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಅವರು, ರಂಜಾನ್ ಹಬ್ಬವನ್ನು ಶಾಂತಿ- ಸೌಹಾರ್ದತೆಯಿಂದ ಎಲ್ಲ ಆಚರಿಸಿ, ಸಮಾಜಕ್ಕೆ ಉತ್ತಮ ಸಂದೇಶ ಸಾರುವಂತೆ ಕರೆ ನೀಡಿದರು.

ಸಭೆಯಲ್ಲಿ ಮುಸ್ಲಿಂ ಮುಖಂಡರು ಮಾತನಾಡಿ, ಜಾಮಿಯಾ ಮಸೀದಿಯಿಂದ ಈದ್ಗಾ ಮೈದಾನಕ್ಕೆ ಹೋಗುವ ಸಂದರ್ಭದಲ್ಲಿ ವಾಹನಗಳಿಂದ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಪೊಲೀಸ್ ಇಲಾಖೆಗೆ ಕೋರಿದರು. ಈ ಸಂದರ್ಭದಲ್ಲಿ ಸಬ್ ಇನ್ಸ್ ಪೆಕ್ಟರ್ ಆರ್ ನಾರಾಯಣಸ್ವಾಮಿ. ಜಹೀರ್ ಪಾಷಾ. ಅಕ್ರಂ ಪಾಷಾ. ವಕೀಲರಾದ ಸಿ.ಎಸ್ .ಅನ್ವರ್ ಖಾನ್. ನಿಸ್ಸಾರ್ ಅಹ್ಮದ್ .ಖಾದರ್.ನದೀಮ್ ಪಾಷಾ ಕವ್ವಾಲಿ, ಕೆ .ಎಸ್. ನೂರುಲ್ಲಾ. ಜಮೀರ್ ಪಾಷಾ. ಸೇರಿದಂತೆ ಹಲವರು ಭಾಗವಹಿಸಿದ್ದರು.

For All Latest Updates

TAGGED:

ABOUT THE AUTHOR

...view details